May 17, 2024

MALNAD TV

HEART OF COFFEE CITY

ದತ್ತಮಾಲೆ ಹಾಕಿದ ವಿ.ಪಕ್ಷ ನಾಯಕ ಆರ್ ಅಶೋಕ್

1 min read

 

ದತ್ತಜಯಂತಿ ದಿನೇ ದಿನೇ ರಂಗು ಪಡೆಯುತ್ತಿದೆ, ವಿಪಕ್ಷ ನಾಯಕ ಆರ್ ಅಶೋಕ್ ಇಂದು ದತ್ತಮಾಲೆ ಹಾಕುವುದರ ಮೂಲಕ ದತ್ತಭಕ್ತರಾದ ಬಿಜೆಪಿ ಮುಖಂಡರ ಸಾಲಿಗೆ ಸೇರಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್ ಬೆಂಗಳೂರಿನಿಂದ ನೇರವಾಗಿ ನಗರಕ್ಕೆ ಆಗಮಿಸಿ ದತ್ತ ಮಾಲಾಧಾರಣೆ ಮಾಡಿದರು.
ಇದೇ ಮೊದಲ ಬಾರಿಗೆ ದತ್ತ ಮಾಲೆ ಯನ್ನು ಆರ್.ಅಶೋಕ್ ಧರಿಸಿದ್ದಾರೆ.
ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಲಾಧಾರಣೆ ಮಾಡಿದ್ದು ನಾಳೆ ಮಾಲಾಧಾರಿಯಾಗಿ ದತ್ತಪೀಠಕ್ಕೆ ತೆರಳಲಿದ್ದಾರೆ. ನಾಳೆ ಮಧ್ಯಾಹ್ನ ಸಾವಿರಾರು ಜನರ ಬೃಹತ್ ಶೋಭಾಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ದತ್ತಮಾಲೆ ಹಾಕುವ ವೇಳೆ ಆರ್ ಅಶೋಕ್ ಗೆ ಉಡುಪಿಯ ಪ್ರಮೋದ್ ಮಧ್ವರಾಜ್ ಸಾಥ್ ನೀಡಿದರು. ಬಜರಂಗದಳ, ವಿ.ಎಚ್.ಪಿ ಹಾಗೂ ಬಿಜೆಪಿ ಮುಖಂಡರು ಸಹಾ ಸಾಥ್ ನೀಡಿದರು ನಾಳೆ ಸಾವಿರಾರು ಜನರ ಜೊತೆ ದತ್ತಜಯಂತಿ ಕಾರ್ಯಕ್ರಮ ದಲ್ಲಿ ಅಶೋಕ್ ಪಾಲ್ಗೊಳ್ಳಲಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!