April 30, 2024

MALNAD TV

HEART OF COFFEE CITY

ದತ್ತಜಯಂತಿ ಹಿನ್ನೆಲೆ : ಸಿ.ಟಿ ರವಿ ಭಿಕ್ಷಾಟನೆ

1 min read

 

 

ದತ್ತಜಯಂತಿ ಹಿನ್ನೆಲೆ ಪಡಿ ಸಂಗ್ರಹದ ಮೂಲಕ ಸಿ.ಟಿ ರವಿ ಭಿಕ್ಷಾಟನೆ ನಡೆಸಿದರು.

 

ನಗರದ ನಾರಾಯಣಪುರ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿ ಸಿ.ಟಿ ರವಿ ಭಿಕ್ಷಾಟನೆ ಮಾಡಿದರು.

ದತ್ತಮಾಲೆ ಧರಿಸಿರುವ ಅವರು ಇರುಮುಡಿಗಾಗಿ ಅಕ್ಕಿ ಬೆಲ್ಲ ಸೇರಿದಂತೆ ಪಡಿ ಸಂಗ್ರಹಿಸಿದರು. 

ನಾಳೆ ದತ್ತಜಯಂತಿ ಹಿನ್ನೆಲೆ ದತ್ತಪೀಠಕ್ಕೆ ತೆರಳಿ ಪಡಿ ವಿಸರ್ಜನೆ ಮಾಡಲಿರುವ ಸಿ.ಟಿ ರವಿ ಇದರ ಅಂಗವಾಗಿ ಇಂದು ಬೆಳಿಗ್ಗೆ ಭಿಕ್ಷಾಟನೆ ನಡೆಸಿದರು. ಈ ವೇಳೆ

ಮನೆ ಬಾಗಿಲಿಗೆ ಬಂದ ಸಿ.ಟಿ ರವಿಗೆ ಅಕ್ಕಿ ಬೆಲ್ಲ ವನ್ನು ಬಡಾವಣೆ ಮಹಿಳೆಯರು ನೀಡಿದರು. ಭಿಕ್ಷಾಟನೆ ನಂತರ ಮಾತನಾಡಿದ ಸಿ.ಟಿ ರವಿ ಸಿ.ಎಂ ಸಿದ್ದರಾಮಯ್ಯಗೂ ಎಲ್ಲಾ ಪಕ್ಷಗಳ ಮುಖಂಡರಿಗೂ ನಾಳಿನ ದತ್ತಜಯಂತಿಗೆ ಆಹ್ವಾನಿಸಿದರು. ಇದೇ ವೇಳೆ ಸನಾತನ ಧರ್ಮ ಕುರಿತು ಮಾತನಾಡಿದ ಅವರು ಸನಾತನ ಧರ್ಮ ಬಹುತ್ವವನ್ನು ಅಳವಡಿಸಿಕೊಂಡಿದ್ದು ಸತ್ಯದ ಪ್ರತಿಪಾದನೆ ಮಾಡುತ್ತದೆ ಎಂದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!