ದತ್ತಪೀಠಕ್ಕೆ ಪ್ರವೇಶ ನಿರಾಕರಣೆ : ಬ್ಯಾರಿಕೇಡ್ ಎಳೆದು ಆಕ್ರೋಶ ವ್ಯಕ್ತಪಡಿಸಿದ ವಿ.ಎಚ್.ಪಿ ಅಧ್ಯಕ್ಷ ಶ್ರೀಕಾಂತ್ ಪೈ
ದತ್ತಜಯಂತಿ ಆರಂಭದ ಮೊದಲ ದಿನ ಪೊಲೀಸರು ಹಾಗೂ ದತ್ತಭಕ್ತರ ನಡುವೆ ಕಾದಾಟಕ್ಕೆ ಕಾರಣವಾಗಿದೆ. ದತ್ತಪೀಠಕ್ಕೆ ಪ್ರವೇಶ ನಿರಾಕರಿಸಿದ ವೇಳೆ ಬ್ಯಾರಿಕೇಡ್ ಎಳೆದು ಪೊಲೀಸರ ವಿರುದ್ಧ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಆಕ್ರೋಶ ವ್ಯಕ್ತಪಡಿಸಿದ ಘಟನೆ ದತ್ತಪೀಠದ ಮುಖ್ಯ ದ್ವಾರದಲ್ಲಿ ನಡೆದಿದೆ.
ದತ್ತಜಯಂತಿ ಮೊದಲ ದಿನವಾದ ಇಂದು ನಗರದಲ್ಲಿ ಸಂಕೀರ್ತನಾ ಯಾತ್ರೆ ನಂತರ ಅನುಸೂಯ ದೇವಿ ಪೂಜೆಗೆ ದತ್ತಪೀಠಕ್ಕೆ ತೆರಳಿದ ವೇಳೆ ಪೊಲೀಸರು ಹಾಗೂ ವಿಶ್ವ ಹಿಂದು ಪರಿಷತ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ದತ್ತಪೀಠ ಮುಖ್ಯದ್ವಾರದ ಒಳ ಪ್ರವೇಶಕ್ಕೆ ನಿರಾಕರಿಸಿದ ಪೊಲೀಸರ ಮೇಲೆ ವಿಎಚ್.ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಕೆಂಡಾಮಂಡಲರಾದರು. ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ವಾಹನ ಹತ್ತಾರು ಕಡೆ ತಡೆದು ತಪಾಸಣೆ ನಡೆಸಲಾಯಿತು. ಕೊನೆಯಲ್ಲಿ ದತ್ತಪೀಠ ಮುಖ್ಯ ದ್ವಾರದಲ್ಲೂ ತಡೆದು ನಿಲ್ಲಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೈ ಎಷ್ಟು ಬಾರಿ ತಡೆಯುತ್ತಿರಾ ಎಂದು ಕೆಳಗಿಳಿದು ತಾವೇ ಬ್ಯಾರಿಕೇಡ್ ಎಳೆದು ಇಲ್ಲೇ ಕುಳಿತುಕೊಳ್ಳುತ್ತೇವೆ ಬಿಡಿ ಎಂದಾಗ ಪೊಲೀಸರು ದತ್ತಭಕ್ತರ ನಡುವೆ ಮಾತಿನ ಚಕಮಕಿ ವಾಗ್ವಾದವೇ ನಡೆಯಿತು. ಈ ವೇಳೆ
ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಸಹಾ ವಿ.ಎಚ್.ಪಿ , ಭಜರಂಗದಳ ಕಾರ್ಯಕರ್ತರು ಮುಂದಾದರು.
ಮುಖ್ಯದ್ವಾರದಲ್ಲಿ ವಾಹನ ತಡೆದ ಪಿಎಸ್ಐ ಮುರಳಿಧರ್ ಅಮಾನತ್ತಿಗೆ ಒತ್ತಾಯಿಸಿ ಎಸ್ಪಿಗೆ ದೂರು ನೀಡಿತ್ತೇವೆ ಎಂದ ವಿಎಚ್.ಪಿ ಮುಖಂಡರು ಹೇಳಿದರು.
ಮೂರು ದಿನಗಳ ದತ್ತಜಯಂತಿ ಅಂಗವಾಗಿ ಇಂದು ದತ್ತಪೀಠದಲ್ಲಿ ನಡೆಯುತ್ತಿರುವ ಅನುಸೂಯ ಜಯಂತಿಗೆ ಸಾವಿರಾರು ಜನ ಪೊಲೀಸರ ನಿಯೋಜಿಸಿ ವ್ಯಾಪಕ ಬಂದೋಬಸ್ತ್ ಮಾಡಿರುವುದಕ್ಕೆ ದತ್ತಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಹತ್ತಾರು ಕಡೆ ಬ್ಯಾರಿಕೇಡ್ ಹಾಕಿ ದತ್ತಭಕ್ತರನ್ನು ತಡೆದು ಪರಿಶೀಲಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿದರು. ಸ್ಥಳೀಯ ಮುಖಂಡರ ಪರಿಚಯವಿಲ್ಲದ ಪೊಲೀಸರನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿರುವುದು ಘಟನೆಗೆ ಕಾರಣವಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g