May 17, 2024

MALNAD TV

HEART OF COFFEE CITY

ಉಕ್ರೇನ್‍ ನಿಂದ ಜಿಲ್ಲೆಯ ಇಬ್ಬರು ಸುರಕ್ಷಿತವಾಗಿ ವಾಪಾಸ್

1 min read

 

ಚಿಕ್ಕಮಗಳೂರು: ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು ಉಕ್ರೇ ನ್‍ನಲ್ಲಿ ಸಿಲುಕಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ವೈಭವ್ ಎಲ್. ಸಪ್ತಗಿರಿ ಮತ್ತು ಕಡೂರು ತಾಲ್ಲೂಕಿನ ಎಚ್.ಸಿ.ಪೂಜಾ ಸುರಕ್ಷಿತವಾಗಿ ತಾಯ್ನಾ ಡಿಗೆ ಮರಳಿದ್ದಾರೆ.

ವೈಭವ್ ಎಲ್.ಸಪ್ತಗಿರಿ ತರೀಕೆರೆ ತಾಲ್ಲೂಕಿನ ಟಿ.ಎನ್.ಲೋಕೇಶ್ ಮತ್ತು ಎ.ಎಸ್. ಕವಿತಾ ದಂಪತಿಗಳ ಪುತ್ರನಾಗಿದ್ದು, ಉಕ್ರೇನ್ ಬೋಕವೇನಿಯಾ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದನು.

ಎಚ್.ಸಿ.ಪೂಜಾ ಕಡೂರು ತಾಲ್ಲೂಕು ಮತ್ತಣಗೆರೆ ಚಂದ್ರಮ್ಮ ಎಂಬುವರ ಪುತ್ರಿಯಾಗಿ ದ್ದು ಝಪೆÇ್ರೀಷಿಯಾ ಸ್ಟೆಟ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಸ್ ವಿದ್ಯಾಭ್ಯಾಸ ಮಾಡುತ್ತಿದ್ದಳು.

ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಇವರಿ ಬ್ಬರು ಉಕ್ರೇನ್‍ನಲ್ಲಿ ಸಿಲುಕೊಂಡಿದ್ದರು. ಯುದ್ಧ ಆರಂಭವಾದ ಬಳಿಕ ಅಲ್ಲಿ ಬಾರೀ ಕಷ್ಟ ಎದುರಿಸಬೇಕಾಯಿತು. ಭಾರತದ ತ್ರಿವರ್ಣ ಧ್ವಜ ನಮ್ಮನ್ನೂ ಕಾಪಾಡಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

 

 

ಇತ್ತೀಚೆಗೆ ಜಿಲ್ಲಾಧಿಕಾರಿಗಳು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲೆಯ 7 ಜನ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಸಿಲುಕಿಕೊಂಡಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದರು. 7ಜನರಲ್ಲಿ ಇಬ್ಬರು ತಾಯ್ನಾಡಿಗೆ ಮರಳಿದ್ದು, ಆಲ್ದೂರಿನ ಪ್ರದ್ವಿನ್, ಸಖರಾಯಪಟ್ಟಣದ ಮನೋಜ್, ಬಸವನಹಳ್ಳಿ ಡಾ|ಶ್ರೀನಿವಾಸ್ ಅವರ ವೈಭವ್ ಸೇರಿದಂತೆ ಉಕ್ರೇನ್‍ನಲ್ಲೆ ಸಿಲುಕಿದ್ದಾರೆ. ಇವರನ್ನು ಸುರಕ್ಷಿತವಾಗಿ ಕರೆ ತರುವ ಜವಬ್ದಾರಿ ಸರ್ಕಾರದ ಮೇಲಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!