ಟಮೋಟೋ ಬಂಗಾರ, ಶುಂಠಿ ವಜ್ರ, ಶುಂಠಿ ಬೆಳೆದ ರೈತ್ರು ರಾತ್ರೋ ರಾತ್ರಿ ಕುಬೇರ
1 min read
ಚಿಕ್ಕಮಗಳೂರು : ರಾಜ್ಯದಲ್ಲಿ ಟಮೋಟೋಗೆ ಚಿನ್ನದ ಬೆಲೆ ಬಂದಿದೆ. ಇದೀಗ ಶುಂಠಿ 60 ಕೆ.ಜಿ.ಚೀಲಕ್ಕೆ 16-18 ಸಾವಿರ ಬೆಲೆ ಬಂದಿದೆ. ಅದೇ 60 ಕೆ.ಜಿ. ಚೀಲಕ್ಕೆ 3 ಸಾವಿರ ರೇಟ್ ಸಿಕ್ರೆ ರೈತ್ರು ನೆಮ್ಮದಿಯ ನಿಟ್ಟುಸಿರು ಬಿಡ್ತಾರೆ. ಹಾಕಿದ ಬಂಡವಾಳಕ್ಕೆ ಡಬಲ್ ದುಡ್ ಮಾಡ್ಕಂಡ್ ಮುಂದಿನ ಬೆಳೆ ಬಗ್ಗೆ ಯೋಚ್ನೆ ಮಾಡ್ತಾರೆ. ಆದ್ರೆ, ಅದೇ 60 ಕೆ.ಜಿ.ಚೀಲಕ್ಕೆ 16-18 ಸಾವ್ರ ಇದ್ರೆ ಹೇಗಾಗ್ಬೋದು. ಎಕರೆಗೆ ಐದು ಲಕ್ಷ ಖರ್ಚು ಮಾಡ್ದೋರೆ ಬೆಳೆ ಬಂದಾಗ 2-3 ಕೋಟಿ ದುಡ್ ನೋಡುದ್ರು ಆಶ್ಚರ್ಯವಿಲ್ಲ. ಪ್ರಸ್ತುತ ಮಾರ್ಕೇಟ್ನಲ್ಲಿ ಶುಂಠಿ ರೇಟ್ 16-18 ಸಾವಿರ ಇದೆ. ಆದ್ರೆ, ಬೆಳೆ ಕಡಿಮೆಯಿದ್ದು ಹೊಲದಲ್ಲಿ ಅರಳುತ್ತಿದೆ. ಡಿಸೆಂಬರ್ ವೇಳೆಗೂ ಶುಂಠಿ ರೇಟ್ ಹೀಗೆ ಇದ್ರೆ ಶುಂಠಿ ಬೆಳೆದ ರೈತ್ರು ಕೋಟ್ಯಾಧೀಶ್ವರರಾಗುತ್ತಾರೆ. ಶುಂಠಿಯ ಇಂದಿನ ಮಾರ್ಕೇಟ್ ದರ ನೋಡಿ ಶುಂಠಿ ರೈತ್ರು ಇದೇ ರೇಟ್ ಇರ್ಲಪ್ಪಾ ಅಂತ ಬೇಡಿಕೊಳ್ತಿದ್ದಾರೆ.
ಶುಂಠಿ ದರ ನೋಡುದ್ರೆ ಆಕಾಶ ಮುಟ್ಟಿದೆ. ಆದ್ರೆ, ಮಾರ್ಕೇಟ್ನಲ್ಲಿ ಇರೋ ಶುಂಠಿಗಿಂತ ಹೊಲದಲಿರೋ ಶುಂಠಿಯೇ ಜಾಸ್ತಿ. ಯಾಕಂದ್ರೆ, ಶುಂಠಿ ಬೆಳೆ ಹಾಕೋದೆ ಏಪ್ರಿಲ್-ಮೇ ತಿಂಗಳಿನಲ್ಲಿ. ಶುಂಠಿ ಬೆಳೆ ಬರೋದಕ್ಕೆ ನವಂಬರ್-ಡಿಸೆಂಬರ್ವರೆಗೂ ಕಾಯಲೇಬೇಕು. ಆದ್ರೆ, ಅಲ್ಲಿವರಿಗೂ ಈ ದರ ಇರುತ್ತಾ ಅನ್ನೋದು ಯಕ್ಷಪ್ರಶ್ನೆಯಾಗಿದೆ. ರೇಟ್ ಇದ್ದೇ ಇರುತ್ತೆ ಅನ್ನೋದು ರೈತ ಆಶಾವಾದ. ಯಾಕಂದ್ರೆ, ಕಳೆದ ನಾಲ್ಕೈದು ವರ್ಷಗಳಿಂದ ಅತಿವೃಷ್ಠಿಯಿಂದ ಶುಂಠಿ ಬಹುತೇಕ ಹಾಳಾಗಿದೆ. ಈ ಬಾರಿ ಸಾಧಾರಣ ಮಳೆಯಾಗಿದ್ದು ಬೆಳೆ ಉತ್ತಮವಾಗಿದೆ. ಹಾಗಾಗಿ, ಈ ಬಾರಿ ಒಳ್ಳೆ ಫಸಲಿನ ಜೊತೆ ಹಣ ನೋಡುವ ನಿರೀಕ್ಷೆ ರೈತರದ್ದು. ಎಕರೆಗೆ 300-400 ಚೀಲ ಶುಂಠಿ ಬೆಳೆ ಬರುತ್ತೆ. ಅಷ್ಟು ಬೆಳೆ ಬಂದಾಗ 3 ಸಾವಿರಕ್ಕೆ ತೃಪ್ತಿ ಪಡೋ ರೈತರಿಗೆ 16-18 ಸಾವ್ರ ಸಿಕ್ರೆ ಹೇಗಾಗ್ಬೋದು ಯೋಚಿಸಿ.
ಒಟ್ಟಾರೆ, ಸದಾ ನಷ್ಟ-ನಷ್ಟ ಅನ್ನೋ ರೈತರು ಈ ಬಾರಿ ಒಂದಷ್ಟು ಹಣ ನೋಡಿದ್ದಾರೆ. ಅದ್ರಲ್ಲೂ ಟಮೋಟೋ ಬೆಳೆದ ರೈತ್ರಂತು ಡಬಲ್ ಖುಷಿಯಾಗಿದ್ದಾರೆ. ಟಮೋಟೋ ಬೆಳೆದ ಲಕ್ಷಾಧೀಶ್ವರರಾಗಿದ್ದ ನೋಡಿದ್ದೇವೆ. ಮುಂದೆ ಶುಂಠಿ ಬೆಳೆದು ಕೋಟ್ಯಾಧೀಶ್ವರರಾಗೋದನ್ನು ನೋಡ್ಬೇಕು. ಯಾಕಂದ್ರೆ, ಅನ್ನದಾತ ಚೆನ್ನಾಗಿರಬೇಕು. ಅನ್ನದಾತ ಚೆನ್ನಾಗಿದ್ರೆ ದೇಶ ನೆಮ್ಮದಿಯಾಗಿರುತ್ತೆ. ರೈತನ ನಗು ದೇಶದ ಹಿತ. ಹಾಗಾಗಿ, ರೈತರು ಯಾವ್ದೆ ಬೆಳೆ ಬೆಳೆದ್ರು ನಷ್ಟವಾಗದೆ ಸಂತಸದಿಂದಿರಲಿ ಅನ್ನೋದು ನಮ್ಮ ಆಶಯ…..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g