ಇಂದು ಮತ್ತು ನಾಳೆ ದಿ|| ಕೆ.ಆರ್. ಗಿರೀಶ್ ಸ್ಮರಣಾರ್ಥ ರಾಜ್ಯ ಮಟ್ಟದ ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾವಳಿ
1 min readಚಿಕ್ಕಮಗಳೂರು : ಪುಟ್ಬಾಲ್ ಅಸೋಷಿಯೇಷನ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿವಂಗತ ಕೆ.ಆರ್. ಗಿರೀಶ್ ರವರ ಸ್ಮರಣಾರ್ಥ ರಾಜ್ಯ ಮಟ್ಟದ ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾವಳಿಯನ್ನು ಇಂದು ಮತ್ತು ನಾಳೆ ನೇತಾಜಿ ಸುಭಾಷ್ ಚಂದ್ರ ಭೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆಸುತ್ತಿದ್ದೇವೆ ಎಂದು ಪುಟ್ಬಾಲ್ ಅಸೋಷಿಯೇಷನ್ನ ಸದಸ್ಯರಾದ ನವೀನ್ ಹೇಳಿದ್ರು. ಅವರು ಇಂದು ಮಲ್ನಾಡ್ ಟಿವಿಯ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡುತ್ತ, ಪುಟ್ಬಾಲ್ ಅಸೋಷಿಯೇಷನ್ನ ಅಧ್ಯಕ್ಷರಾಗಿ ಕೆ.ಆರ್. ಗಿರೀಶ್ ಉತ್ತಮ ಸೇವೆ ಸಲ್ಲಿಸಿದ್ದರು. ಇವರು ಇತ್ತಿಚೆಗೆ ದೇಹಾಂತ್ಯವಾಗಿದ್ದು ಇವರ ಸ್ಮರಣಾರ್ಥ ಕೆ.ಆರ್. ಗಿರೀಶ್ ಸ್ಮರಣಾರ್ಥ ಕಫ್-2021, ರಾಜ್ಯ ಮಟ್ಟದ ಹೊನಲು ಬೆಳಕಿನ ಪಂದ್ಯಾಳಿಯನ್ನು ಆಡಿಸುತ್ತಿದೇವೆ ಎಂದು ಹೇಳಿದ್ರು. ಇದೇ ವೇಳೆ ಮಾತನಾಡಿದ ಅಸೋಷಿಯೇಷನ್ನ ಕಾರ್ಯದರ್ಶಿ ಎ.ಎನ್. ಸತ್ಯನಾರಾಯಣ ರಾಜ್ಯ ಮಟ್ಟದ ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾವಳಿಯು ಜಿಲ್ಲೆಯಲ್ಲಿ ನಡೆಯುತ್ತಿರುವುದು ಇದು ಪ್ರಥಮವಾಗಿದೆ. ಈ ಪಂದ್ಯಾವಳಿಯಲ್ಲಿ ಎಲ್ಲಾ ಜಿಲ್ಲೆಗಳ ಉತ್ತಮ ಆಟ ಆಡುವ 120 ಜನರ 16 ತಂಡಗಳು ಭಾಗವಹಿಸುತ್ತಿವೆ. ಇದಲ್ಲಿ ಚಿಕ್ಕಮಗಳೂರಿನಿಂದ 2 ತಂಡಗಳು ಸ್ಪರ್ಧಿಸುತ್ತಿವೆ. ಇಂದು ಸ್ಥಳೀಯ ತಂಡಗಳಿಗೆ ನಾಕೌಟ್ ಪಂದ್ಯವಿರುತ್ತದೆ. ನಾಳೆ ರಾಜ್ಯ ಮಟ್ಟದಲ್ಲಿ ಭಾಗವಹಿಸಿರುವ ತಂಡಗಳ ಲಿಗ್ ಪಂದ್ಯ ಇರುತ್ತದೆ. ಪ್ರೇಕ್ಷಕರಿಗೆ ಉತ್ತಮ ರಸದೌತಣ ನೀಡಲಿವೆ ಎಂದು ಹೇಳಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g