May 8, 2024

MALNAD TV

HEART OF COFFEE CITY

ಗ್ರಾಮಸ್ಥರಿಂದ ರಸ್ತೆ ದುರಸ್ತಿ.. ಜನನಾಯಕರ ವಿರುದ್ಧ ಜನಾಕ್ರೋಶ..!

1 min read

ಚಿಕ್ಕಮಗಳೂರು: ಗ್ರಾಮಸ್ಥರು ತಮ್ಮ ಊರಿನ ರಸ್ತೆಯನ್ನ ತಾವೇ ಹಣ ಹಾಕಿ ದುರಸ್ಥಿ ಕಾಮಗಾರಿ ಮಾಡಿಕೊಂಡರುವ ಘಟನೆ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಹೌದು ಎನ್.ಆರ್.ಪುರ ತಾಲೂಕಿನ ಕರ್ಕೇಶ್ವರ-ಗಬ್ಬೂರು ರಸ್ತೆಯನ್ನು ಹಳ್ಳಿಗರು ತಾವೇ ಹಣ ಹಾಕಿ ದುರಸ್ಥಿ ಕಾರ್ಯ ಮಾಡಿಕೊಂಡಿದ್ದಾರೆ. ಈ ರಸ್ತೆ ದುರಸ್ಥಿ ಕಾರ್ಯ ಮಾಡುವಂತೆ ಹಲವಾರು ಬಾರಿ ಅಧಿಕಾರಿಗಳು, ಜನನಾಯಕರಿಗೆ ಎಷ್ಟೇ ಮನವಿ ಮಾಡಿದರೂ ನೋ ಯೂಸ್. ಇದರಿಂದ ಬೇಸತ್ತ ಜನರು ತಾವೇ ಹಣ ಹಾಕಿ, ಮಣ್ಣು ತರಿಸಿಕೊಂಡು ರಸ್ತೆ ದುರಸ್ಥಿ ಮಾಡಿಸಿಕೊಂಡಿದ್ದಾರೆ. ಮೂಲಸೌಕರ್ಯಗಳನ್ನೇ ಸರಿಯಾಗಿ ನೀಡದ ಬೇಜವಾಬ್ದಾರಿ ಅಧಿಕಾರಿಗಳು, ಜನನಾಯಕರ ವಿರುದ್ಧ ಮಲೆನಾಡಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ, ತಾಲೂಕು, ಪಂಚಾಯಿತಿಯಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಸ್ತೆ ಇಲ್ಲ ಎಂದು ಜನ ವ್ಯಂಗ್ಯ ಮಾಡುತ್ತಿದ್ದಾರೆ, ಟ್ರಿಪಲ್ ಇಂಜಿನ್ ಸರ್ಕಾರವಿದ್ದರೂ ಉಪಯೋಗವಿಲ್ಲ. ಕಳೆದ ಬಾರಿ ಕೆಲಸಕ್ಕೆ ಜೀವರಾಜ್ ಕೆಲಸ ಮಾಡಲು ಬಿಡುತ್ತಿಲ್ಲ ಎನ್ನುತ್ತಿದ್ರಿ… ಈಗ ಯಾರು ನಿಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರಿಗೆ ಮಲೆನಾಡಿಗರು ಪ್ರಶ್ನೆ ಮಾಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!