ಚಿಕ್ಕಮಗಳೂರು ನಗರಸಭೆಯಲ್ಲಿ ಬಾರಿ ಹೈಡ್ರಾಮಾ..! ಎಸ್.ಡಿ.ಪಿ.ಐ. ಬೆಂಬಲ ಪಡೆದ ಬಿಜೆಪಿ..?
1 min read
ಚಿಕ್ಕಮಗಳೂರು : ವರಸಿದ್ದಿ ವೇಣುಗೋಪಾಲ್ ಅವರನ್ನು ನಗರಸಭಾ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲು ಬಿಜೆಪಿ ಸದಸ್ಯರು ಎಸ್.ಡಿ. ಪಿ.ಐ ಬೆಂಬಲ ಪಡೆಯಲು ಮುಂದಾಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.
ಹೌದು ಚಿಕ್ಕಮಗಳೂರು ನಗರಸಭೆಯಲ್ಲಿ ಎಸ್.ಡಿ.ಪಿ.ಐ. ಸದಸ್ಯರ ಬೆಂಬಲವನ್ನು ಪಡೆಯಲು ಬಿಜೆಪಿ ಮುಂದಾಗಿದೆ. ಬಿಜೆಪಿ ಪಕ್ಷದಿಂದ ಅಮಾನತ್ತಾಗಿರುವ ನಗರಸಭೆ ಅಧ್ಯಕ್ಷರನ್ನು ಕೆಳಗಿಳಿಸಲು ನಿಟ್ಟಿನಲ್ಲಿ ಬಿಜೆಪಿ ಸದಸ್ಯರು ಈ ಪ್ಲಾನ್ ಮಾಡಿದ್ದಾರೆ. ಮಾಜಿ ಸಚಿವ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಕ್ಷೇತ್ರದಲ್ಲಿ
ಎಸ್.ಡಿ.ಪಿ. ಐ. ಸದಸ್ಯನ ಬೆಂಬಲ ಪಡೆಯಲು ಬಿಜೆಪಿ ಮುಂದಾಗಿದೆ.
ಬಿಜೆಪಿ ಪಕ್ಷದ ಆಂತರಿಕ ಒಪ್ಪದ ಪ್ರಕಾರ ರಾಜೀನಾಮೆ ನೀಡದ ಮಾಜಿ ಸಚಿವ ಸಿ.ಟಿ ರವಿ ಆಪ್ತ ವರಸಿದ್ದಿ ವೇಣುಗೋಪಾಲ್ ಅವರು ಪಕ್ಷದ ಆದೇಶದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಆದ್ದರಿಂದ ವರಸಿದ್ದಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿಲು ಬಿಜೆಪಿಯು
ಎಸ್.ಡಿ.ಪಿ.ಐ ಜೊತೆಗೆ ಕೈ ಜೊಡಿಸಲು ಮುಂದಾಗಿದೆ.
ಬಿಜೆಪಿ ಸಭೆಯಲ್ಲಿ ಎಸ್. ಡಿ. ಪಿ. ಐ. ಜೆಡಿಎಸ್ ಸದಸ್ಯರು ಭಾಗಿಯಾಗಿದ್ದು, ಎಸ್.ಡಿ.ಪಿ.ಐ. ಬೆಂಬಲ ಪಡೆದು ಅಧ್ಯಕ್ಷರನ್ನು ಕೆಳಗೆ ಇಳಿಸಲು ತಯಾರಿ ಮಾಡಲಾಗುತ್ತಿದೆ.
35 ಸದಸ್ಯರ ಸಂಖ್ಯಾಬಲ ಹೊಂದಿರುವ ನಗರಸಭೆಯಲ್ಲಿ 18 ಮಂದಿ ಬಿಜೆಪಿ ಸದಸ್ಯರು, 3 ಜೆಡಿಎಸ್ , ಎಸ್ ಡಿ ಪಿ ಐ 1, ಪಕ್ಷೇತರ, ಕಾಂಗ್ರೆಸ್ ಪಕ್ಷದಿಂದ13 ಮಂದಿ ಆಯ್ಕೆ ಆಗಿದ್ದಾರೆ.
ವರಸಿದ್ದಿ ವೇಣುಗೋಪಲ್ ನಗರ ಸಭೆ ಅಧ್ಯಕ್ಷರ ಸ್ಥಾನದಿಂದ ಕೆಳಗಿಳಿಸುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರಸಭೆ ಹಲವು ಹೈಡ್ರಾಮಗಳಿಗೆ ಸಾಕ್ಷಿ ಆಗುತ್ತಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g