ಏಕರೂಪದ ಭೂ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ
1 min readಚಿಕ್ಕಮಗಳೂರು: ಮಳಲೂರು ಏತನೀರಾವರಿ ಯೋಜನೆಗೆ ಜಮೀನು ನೀಡಿರುವ ರೈತರಿಗೆ ಏಕರೂಪದ ಪರಿಹಾರ ನೀಡಬೇಕೆಂದು ಗ್ರಾಮದ ಸೋಮೇಗೌಡ ಜಿಲ್ಲಾಡಳಿತವನ್ನು ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ಬುಧವಾರ ಮಾತನಾಡಿ, ಭೂಮಿಕಳೆದಕೊಂಡಿರುವ ನಿರಾಶ್ರಿತರಿಗೆ ಒಂದೊಂದು ರೀತಿಯ ದರನಿಗದಿಪಡಿಸಿದ್ದನ್ನು ವಿರೋಧಿಸಿ ಭೂಮಿನೀಡಲು ನಿರಾಕರಿಸಲಾಗಿತ್ತು. ಜಿಲ್ಲಾಡಳಿತ ಮಳಲೂರು ಏತನೀರಾವರಿ ನಿರಾಶ್ರಿತರು ಏಕರೂಪದ ದರನಿಗದಿಪಡಿಸುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದರು.
ಕಾವೇರಿನೀರಾವರಿ ನಿಗಮದ ಅಧಿಕಾರಿಗಳು ಮಳಲೂರು ಏತನೀರಾವರಿ ಯೋಜನೆಗೆ ಜಮೀನನ್ನು 2012ರಲ್ಲಿ ಸ್ವಾಧೀನಪಡಿಸಿಕೊಂಡು 10 ವರ್ಷಗಳಾದರೂ ನ್ಯಾಯಯುತ ಪರಿಹಾರ ನೀಡದಿರುವುದರಿಂದ ದಯಾಮರಣಕೋರಿ 2021ರ ನವೆಂಬರ್ 10ರಂದು ರಾಷ್ಟ್ರಪತಿಗೆ ವಿಭಾಗಾಧಿಕಾರಿ ಕಚೇರಿ ಮೂಲಕ ಮನವಿ ಸಲ್ಲಿಸಲಾಗಿತ್ತೆಂದರು.
ಏತನೀರಾವರಿ ಯೋಜನೆಗೆ 19.14 ಎಕರೆ ಜಮೀನನ್ನು ಕಾವೇರಿ ನಿಗಮದ ಅಧಿಕಾರಿಗಳು 2012ರಲ್ಲಿ ರೈತರಿಗೆ ನೋಟೀಸ್ ನೀಡದೆ,ಯಾವುದೇ ಪರಿಹಾರವನ್ನು ಕೊಡದೆ ಏಕಾಏಕಿ ಕಾಲುವೆ ತೋಡಿದ್ದಾರೆ. ಈಗ ಪೈಪ್ಲೈನ್ ಬೇರೆ ಜಮೀನಿನಲ್ಲಿ ಹೋಗುವ ಸಾಧ್ಯತೆಗಳಿವೆ. ಇಷ್ಟುವರ್ಷ ಬೆಳೆಯೂ ಇಲ್ಲ, ಪರಿಹಾರವೂ ದೊರಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g