ಪಾದಯಾತ್ರೆ ಭಕ್ತರು ಬಿಸಾಡಿದ ಆಹಾರ ಸೇವಿಸಿ ಹಸುಗಳು ಸಾವು
1 min read
ಚಿಕ್ಕಮಗಳೂರು: ಮಹಾಶಿವರಾತ್ರಿಯಂದು ಧರ್ಮಸ್ಥಳದ ಮಂಜುನಾಥೇಶ್ವರನ ಸನ್ನಿದಿಗೆ ತೆರಳಿ ಅತನ ದರ್ಶನ ಪಡೆಯಲು ಹಾಸನ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಬಂದ ಭಕ್ತರಿಗೆ ಅಲ್ಲಲ್ಲಿ ಶಿಬಿರಗಳನ್ನು ಏರ್ಪಡಿಸಿ ಆಹಾರ ನೀಡುವ ಮೂಲಕ ಸತ್ಕರಿಸುವ ಕಾರ್ಯಕ್ಕೆ ಸಾರ್ವಜನಿಕರು ಮುಂದಾಗಿದ್ದರು.
ಭಕ್ತರು ಆಹಾರಸೇವಿಸಿ, ಹಸಿವಾದಾಗ ದಾರಿಮಧ್ಯೆ ತಿನ್ನಲು ಪಡೆದುಕೊಂಡುಹೋಗಿದ್ದ ಅನ್ನವನ್ನು ರಸ್ತೆ ಬದಿಯಲ್ಲಿ ಬಿಸಾಗಿ ಹೋಗಿದ್ದು, ಅವುಗಳನ್ನು ಸೇವಿಸಿದ ಮೂಡಿಗೆರೆ ತಾಲೂಕಿನಲ್ಲಿ ಕಸ್ಕೆಬೈಲಿನಲ್ಲಿ 12 ಜಾನುವಾರುಗಳ ಸಾವಪ್ಪಿವೆ. ಭಕ್ತರು ಬಂದಿರುವ ಮಾರ್ಗದಲ್ಲಿ ಒಟ್ಟು 20ಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿವೆ ಎಂದು ಹೇಳುತ್ತಿದ್ದಾರೆ
ಮನೆಯಲ್ಲಾಗಲಿ ಯಾರೂ ಹಸುಗಳಿಗೆ ಅನ್ನವನ್ನು ಕೊಡೊದಿಲ್ಲ, ಹೊಟ್ಟೆ ಉಬ್ಬರಿಸಿದಂತಾಗಿ, ಜೀವಕ್ಕ ಅಪಾಯ ಬಂದೊದಗಲಿದೆ ಎಂದು ತಿಳಿದು ಅನ್ನಮಿಶ್ರಿತ ಗಂಜಿ ಕೊಡುತ್ತಿರಲಿಲ್ಲ, ಆದರೆ, ರಸ್ತೆಬದಿಯಲ್ಲಿ ಎಸೆದಿರುವ ಹಳಸಿದನ್ನವನ್ನು ತಿಂದು ತಮ್ಮ ಜೀವಕ್ಕೆ ಸಂಚಕಾರ ತಂದುಕೊಂಡಿವೆ.
ಗೋಣಿಬೀಡಿನ ಸಂದೀಪ ಅವರ ಸಿಂದಿಹಸು ಸೇರಿದಂತೆ ನಾಟಿಹಸುಗಳನ್ನು ಸಾಕಿದ್ದಾರೆ. ಸಿಂದಿಹಸು ದಿನಕ್ಕೆ 3 ಲೀಟರ್ ಹಾಲುಕೊಡುತ್ತಿದ್ದು, ಇದರಿಂದ ಬರುವ ವರಮಾನದಲ್ಲಿ ಸಂಸಾರದ ಸ್ವಲ್ಪ ಖರ್ಚನ್ನು ಹೇಗೋ ನಿಭಾಯಿಸುತ್ತಿದ್ದರು. ಈಗ ವರಮಾನ ತಂದುಕೊಡುತ್ತಿದ್ದ ಹಸುವೂ ಇಲ್ಲವಾಗಿದ್ದು, ಮುಂದೇನೆಂಬ ಚಿಂತೆ ಕಾಡತೊಡಗಿದೆ.
ಕಸ್ಕೆಬೈಲಿನಿಂದ ಗೋಣಿಬೀಡಿನವರೆಗೆ ಒಟ್ಟು 12 ಕರುಗಳು ಸಾವಪ್ಪಿವೆ ಎಂದು ಹೇಳಲಾಗುತ್ತಿದೆ. ಕಸ್ಕೆಬೈಲಿನ ಮನೆಯೊಂದಕ್ಕೆ ಭೇಟಿನೀಡಿರುವ ಪಶುವೈದ್ಯರು ಸಾವಪ್ಪಿದ್ದ ಹಸುವನ್ನು ಪರೀಕ್ಷಿಸಿ, ಸಕಾಲದಲ್ಲಿ ಚಿಕಿತ್ಸೆ ದೊರೆತ್ತಿದ್ದರೆ ಬದುಕುಳಿಯುವ ಸಾಧ್ಯತೆಗಳಿತ್ತೆಂದು ಹೇಳಿದ್ದಾರೆ.
ರಸ್ತೆಬದಿ ಎಸೆದಿದ್ದ ಹಳಸಿದ ಅನ್ನಸೇವಿಸಿ ಸಾವಪ್ಪಿವೆಯೋ ಅಥವಾ ಇತರೆ ಕಾರಣಗಳಿಗೆ ಅನುನೀಗಿವೆಯೋ ಅಂಬುದನ್ನು ವೈದ್ಯರೇ ಸ್ಪಷ್ಟಪಡಿಸಬೇಕಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g