ಕಾಫಿನಾಡ ನೊಂದ ಕುಟುಂಬಗಳ ಕಥೆ..!
1 min readಕೊಪ್ಪ: 2018ರಲ್ಲಿ ಮಲೆನಾಡಲ್ಲಿ ಸುರಿದ ಮಳೆ ಅದೆಷ್ಟೋ ಕುಟುಂಬಗಳನ್ನ ಬೀದಿಗೆ ತಂದು ನಿಲ್ಲಿಸಿತ್ತು. ಮನೆಯ ಗೋಡೆಗಳು ಬಿರುಕು ಬಿಟ್ಟು ಕುಸಿಯುತ್ತಿದ್ದಾಗ ಅಧಿಕಾರಿಗಳೇ ಅವ್ರಿಗೆ ನೆಲೆ ಕೊಟ್ಟದ್ದು ಸರ್ಕಾರಿ ಶಾಲೇಲಿ. ಮುಚ್ಚಿದ ಸ್ಕೂಲಲ್ಲೇ ಆ ಕುಟುಂಬ ಜೀವನ ಸಾಗಿಸ್ತಿತ್ತು. ಮೂರು ವರ್ಷಗಳಿಂದ ಆ ಕುಟುಂಬಕ್ಕೆ ಬಿಡುಗಡೆಯ ಭಾಗ್ಯವೇ ಸಿಕ್ಕಿಲ್ಲ. ಜನವರಿ, ಫೆಬ್ರವರಿ, ಮಾರ್ಚ್ಗೆ ಮನೆ ಎಂದೇಳೋ ಸರ್ಕಾರ ಎರಡು ವರ್ಷದಿಂದ ಅತ್ತ ತಿರುಗೂ ನೋಡಿಲ್ಲ. ಆಗೊಮ್ಮೆ-ಈಗೊಮ್ಮೆ ಬರೋ ಅಧಿಕಾರಿಗಳು ಬರುತ್ತೆ ಅಂತ ಭರವಸೆಯ ಮನೆಯನ್ನೇ ಕಟ್ತಿದ್ದಾರೆ. ಇದು ಕಾಫಿನಾಡ ನೊಂದ ಕುಟುಂಬಗಳ ಕಥೆ.. ಟಾರ್ಪಲ್ನಲ್ಲಿ ಗುಡಿಸಲು ಕಟ್ಕೊಂಡು ಬದುಕ್ತಿರೋ ಒಂದು ಕುಟುಂಬ. ಎರಡು ವರ್ಷಗಳಿಂದ ಶಾಲೆಯಲ್ಲೇ ಜೀವನ ಮಾಡ್ತಿರೋ ಮತ್ತೊಂದು ಕುಟುಂಬ. ಇವೆರಡು ಕೊಪ್ಪ ತಾಲೂಕಿನ ಹೇರೂರು ಹಾಗೂ ಹುಲಿಗರಡಿ ಗ್ರಾಮದಲ್ಲಿರೋ ಕುಟುಂಬಗಳು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g