ಮನೆ ಕೊಡದ ಸರ್ಕಾರ ಶಾಲೆಯಲ್ಲಿ ಬದುಕುತ್ತಿರೋ ಕುಟುಂಬ
1 min readಕೊಪ್ಪ .2018ರಲ್ಲಿ ಸುರಿದ ಮಹಾಮಳೆ ಮಲೆನಾಡಿಗರ ಬದುಕನ್ನೇ ನುಂಗಿ ನೀರು ಕುಡಿದು ಇರೋಕೆ ನೆಲೆ ಇಲ್ಲದಂತೆ ಮಾಡಿತ್ತು.ಅಧಿಕಾರಿಗಳು ಮುಚ್ಚಿದ ಶಾಲಾ ಕೊಠಡಿಯೇ ಕುಟುಂಬವೊಂದಕ್ಕೆ ಆಸರೆಯಾಗಿತ್ತು, ಬಂದ ಅಧಿಕಾರಿಗಳು ಎರಡು ವರ್ಷದಿಂದ ಮನೆ ಕಟ್ಟಿಸಿಕೊಡುತ್ತಲೇ ಇರೋದ್ರಿಂದ ನೊಂದ ಕುಟುಂಬವೊಂದು ಶಾಲೆ ಕಟ್ಟಡದಲ್ಲೇ ವಾಸ ಮಾಡ್ತಿರೋ ಘಟನೆ .ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹುಲಿಗರಡಿ ಗ್ರಾಮದಲ್ಲಿ ನಡೆದಿದೆ. ಹುಲಿಗರಡಿ ಶಾಂಭವಿ ಎಂಬುವರ ಕುಟುಂಬ ಅಂದಿನಿಂದ ಮುಚ್ಚಿದ ಶಾಲೆಯಲ್ಲೇ ಬದುಕ್ತಿದ್ದಾರೆ. ಅಡುಗೆ, ಊಟ, ವಾಸ, ನಿದ್ರೆ ಎಲ್ಲಾ ಶಾಲೆಯಲ್ಲೇ. ಸ್ನಾನಕ್ಕೆ ಬಾತ್ ರೂಂ ಇಲ್ಲ. ಶೌಚಾಲಯ ಕೇಳೋದೇ ಬೇಡ. ತಾತ್ಕಾಲಿಕವಾಗಿರಿ ಎಂದ ಅಧಿಕಾರಿಗಳು ಎರಡು ವರ್ಷದಿಂದ ಇವ್ರಿಗೆ ಮನೆ ಕಟ್ಟಿಸಿ ಕೊಡೋದ್ರಲ್ಲೇ ಇದ್ದಾರೆ. ಬಂದೋರು ತಿಂಗಳುಗಳ ಹೆಸರು ಹೇಳಿ ಹೋಗ್ತಿದ್ದಾರೋ ವಿನಃ ಬದಲಿ ವ್ಯವಸ್ಥೆ ಮಾಡಿಲ್ಲ. ಐದು ಲಕ್ಷದಲ್ಲಿ ಒಂದು ಲಕ್ಷ ಮಾತ್ರ ನೀಡಿದ್ದಾರೆ. ಉಳಿದ ನಾಲ್ಕು ಲಕ್ಷ ಇಂದಿಗೂ ಇವ್ರ ಕೈಗೆ ಬಂದಿಲ್ಲ. ಮನೆಗೆ ತಳಪಾಯ ಹಾಕಿರೋ ಇವ್ರು ಸರ್ಕಾರದ ಹಣದ ದಾರಿ ಕಾಯ್ತಿದ್ದಾರೆ. ಆದ್ರೆ, ಅಧಿಕಾರಿಗಳು ಒಂದೊಂದು ಕಾನೂನು-ಕಟ್ಟಳೆಗಳನ್ನ ಹೇಳ್ಕೊಂಡು ದಿನ ದೂಡ್ತಿದ್ದಾರೆ.
ಇನ್ನು ಹೇರೂರು ಗ್ರಾಮದ ಕೃಷ್ಣ ಕುಟುಂಬದ ಕಥೆಯೂ ಇದೆ ಹಾಗಿದೆ, ಇವರಿಗೆ ಒಂದು ಲಕ್ಷ ಹಣ ನೀಡಿರೋ ಅಧಿಕಾರಿಗಳು ಉಳಿದ ಹಣವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಲೆಸುತ್ತಿದ್ದಾರೆ. ಇನ್ನು ಈ ಎರಡು ಕುಟುಂಬಗಳಿಗೆ ಸರ್ಕಾರ ಅಂದೇ ಒಂದು ಲಕ್ಷ ಪರಿಹಾರ ನೀಡಿದೆ. ಆ ದುಡ್ಡಲ್ಲೇ ಮನೆ ಕಟ್ಟಿಕೊಳ್ಳಳು ಎರಡೂ ಕುಟುಂಬಗಳು ತಳಪಾಯ ಹಾಕಿಕೊಂಡಿದ್ದಾರೆ. ಅರ್ಧಂಬರ್ಧ ಮನೆ ಕಟ್ಕೊಂಡು ಪರದಾಡ್ತಿದ್ದಾರೆ. ಮಲೆನಾಡಲ್ಲಿ ಇಂತಹಾ ನೂರಾರು ಮನೆಗಳಿವೆ. ಮನೆ ಬೀಳುತ್ತಿದ್ದಂತೆ ಈ ಕುಟುಂಬಗಳನ್ನ ಶಾಲೆಗೆ ಬಿಟ್ಟ ಅಧಿಕಾರಿಗಳು ಸೌಲಭ್ಯ ಕಲ್ಪಿಸೋದ ಮರೆತಿವೆ. ಚುನಾವಣೆ ಸಂದರ್ಭದಲ್ಲಿ ಇದೇ ಶಾಲಾ ಕೊಠಡಿ ಬೂತ್ ಆಗಿತ್ತು. ಆಗ ಬಂದಿದ್ದ ತಹಶೀಲ್ದಾರ್ ಇನ್ನೂ ಮನೆ ಸಿಕ್ಕಿಲ್ವಾ, ಇವ್ರಿಗೆ ಬೇಗ ಮನೆ ಕೊಡಿ ಎಂದು ಅಧಿಕಾರಿಗಳಿಗೆ ಹೇಳಿದ್ರು. ಆದ್ರೆ, ಎಲೆಕ್ಷನ್ ಮುಗಿದ ಮೇಲೆ ಎಲ್ಲರೂ ಮರೆತಿದ್ದಾರೆ. ಇರೋ ಒಂದು ಎಕರೆ ಅಡಕೆ ತೋಟ ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಮಗನನ್ನ ಹಾಸ್ಟೆಲ್ನಲ್ಲಿ ಬಿಟ್ಟು ಕೂಲಿ ಮಾಡ್ತಾ ಸರ್ಕಾರದ ನೆರವಿನ ಹಾದಿ ಕಾಯ್ತಿದ್ದಾರೆ. ನಾವು ಬೇರೇನೂ ಕೇಳೋಲ್ಲ. ಇರೋಕೆ ಒಂದು ಸೂರು ನಿರ್ಮಿಸಿಕೊಡಿ ಅಂತ ನೊಂದವರು ಸರ್ಕಾರಕ್ಕೆ ಪರಿ-ಪರಿಯಾಗಿ ಬೇಡಿಕೊಳ್ತಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g