ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಂದು ಉಳಿಯಲು ಜಾಗವಿಲ್ಲದೇ ಪರದಾಡುವವರಿಗೆ ಪೊಲೀಸ್ ಇಲಾಖೆ ಸಾಥ್
1 min readಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬೇರೆ ಬೇರೆ ಊರುಗಳಿಂದ ಬರುವ ಪರೀಕ್ಷಾರ್ಥಿಗಳು ಉಳಿದುಕೊಳ್ಳಲು ಜಾಗವಿಲ್ಲದೇ ಪರದಾಡುವ ಸ್ಥಿತಿ ಪ್ರತಿ ಪರೀಕ್ಷೆ ನಡೆಯುವ ವೇಳೆ ಕಾಣಸಿಗುತ್ತಿತ್ತು, ಇದಕ್ಕೆ ಈ ಬಾರಿ ಪೊಲೀಸ್ ಇಲಾಖೆ ಇದಕ್ಕೆ ಪರಿಹಾರ ಎಂಬಂತೆ ದೂರದ ಊರುಗಳಿಂದ ಬರುವ ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದೆ.
ನಗರದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದರೆ ಅದರ ಹಿಂದಿನ ದಿನ ಬಸ್ ಸ್ಟಾಂಡ್ ನಲ್ಲಿ ಮಲಗುವ ಪರೀಕ್ಷಾರ್ಥಿಗಳ ಪಾಡು ಕೇಳುವವರೆ ಇಲ್ಲವಾಗಿರುತ್ತೆ, ಇದನ್ನು ಮನಗಂಡ ಚಿಕ್ಕಮಗಳೂರು ಪೊಲೀಸ್ ಇಲಾಖೆ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿ ಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.
ನಾಳೆ ನಗರದಲ್ಲಿ ನಡೆಯಲಿರುವ ಪೋಲಿಸ್ ನೇರ ನೇಮಕಾತಿ ಲಿಖಿತ ಪರೀಕ್ಷೆ ಬರೆಯಲು ನಗರಕ್ಕೆ ಆಗಮಿಸಿ ಉಳಿದುಕೊಳ್ಳಲು ಆಗದೆ ಪರದಾಡುವವರಿಗೆ ನಗರದ ಬಾರ್ ಲೇನ್ ರಸ್ತೆಯ ಪೊಲೀಸ್ ಸಮುದಾಯ ಭವನದಲ್ಲಿ ಉಳಿದುಕೊಳ್ಳಲು ಬೆಳಿಗ್ಗೆ ಫ್ರೆಶ್ ಅಪ್ ಆಗಲು ವ್ಯವಸ್ಥೆ ಕಲ್ಪಿಸಿದೆ. ಆಸಕ್ತಿ ಇರುವ ಪರೀಕ್ಷಾರ್ಥಿಗಳು ಈ ಸೌಲಭ್ಯ ಉಪಯೋಗಿಸಿಕೊಳ್ಳಲು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಆರ್ ಪಿಐ ನಾರಾಯಣ ಪೂಜಾರ್ 9480805106
ಆರ್.ಎಸ್ಐ Y K ಕುಮಾರ್
8792342258
ಕಂಟ್ರೋಲ್ ರೂಂ. 9480805100
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g