May 6, 2024

MALNAD TV

HEART OF COFFEE CITY

ಮೂಡಿಗೆರೆ ಬಿಜೆಪಿ ಕಚ್ಚಾಟ: ಜಿಲ್ಲಾಧ್ಯಕ್ಷರ ವಿರುದ್ಧ ಉಚ್ಚಾಟಿತರು ಕೆಂಡಾಮಂಡಲ

1 min read

ಚಿಕ್ಕಮಗಳೂರು: ಮೂಡಿಗೆರೆ ಬಿಜೆಪಿ ಜಗಳ ಬೀದಿಗೆ ಬಿದ್ದು ಕಚ್ಚಾಟ ನಡೆದ ಬೆನ್ನಲ್ಲೇ ಪಕ್ಷದ ನೂತನ ಜಿಲ್ಕಾಧ್ಯಕ್ಷ ದೇವರಾಜ್ ಶೆಟ್ಟಿ ವಿರುದ್ಧ ಉಚ್ಚಾಟಿತ ಗೋಣಿಬೀಡು, ಬಣಕಲ್ ಹೋಬಳಿ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಬಹಿರಂಗವಾಗಿ ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅಪಾರ ಬೆಲೆ ತೆರಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ಮೂಡಿಗೆರೆ ಬಿಜೆಪಿ ಅಧ್ಯಕ್ಷರ ನೇಮಕ ನಂತರ ರಸ್ತೆಯಲ್ಲಿ ಹೊಡೆದಾಡಿಕೊಂಡು ಬೀದಿ ಜಗಳ ನಡೆದಿದ್ದ ಬಿಜೆಪಿ ಕಲಹ ಮತ್ತಷ್ಟು ಜಟಿಲವಾಗುತ್ತಿದೆ. ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ವಿರುದ್ಧ ಬಹಿರಂಗ ಸಮರಕ್ಕೆ ಗೋಣಿಬೀಡು, ಬಣಕಲ್ ಹೋಬಳಿ ಉಚ್ಚಾಟಿತ ಅಧ್ಯಕ್ಷರು ಇಳಿದಿದ್ದಾರೆ. ಯಾವುದೇ ವಿವರಣೆ ಕೇಳದೆ ಪಕ್ಷದಲ್ಲಿರುವ ಸಂವಿಧಾನದ ಕಾನೂನು ಬಾಹಿರವಾಗಿ ಉಚ್ಚಾಟನೆ ಮಾಡಲಾಗಿದೆ ಎಂದು ಪಿ.ಜಿ ಅನುಕುಮಾರ್ ಮತ್ತು ಕನ್ನಹಳ್ಳಿ ಭರತ್ ಆರೋಪಿಸಿದ್ದಾರೆ, ರಸ್ತೆಯಲ್ಲಿ ಹೊಡೆದಾಟದ ಘಟನೆಗೆ ಕಾರಣವಾದ ಕೆ.ಸಿ ರತನ್ ಹಾಗೂ ಪಂಚಾಕ್ಷರಿ ವಿರುದ್ಧ ಆಕ್ರೋಶ ಹೊರಹಾಕಿರುವ ಇಬ್ಬರು ಮುಖಂಡರು ಕಳೆದ ಚುನಾವಣೆ ವೇಳೆ ಮೂಡಿಗೆರೆಗೆ ಆಗಮಿಸಿದ್ದ ಯಡಿಯೂರಪ್ಪರನ್ನು ಕಾರಿನಿಂದ ಇಳಿಯದಂತೆ ಮಾಡಿದ್ದು ಅಶಿಸ್ತು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಎಂಎಲ್.ಎ ಎಲೆಕ್ಷನ್ ಸೋಲಲು ಕಾರಣವಾಗಿದ್ದ ರತನ್ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಕ್ರಮ ಏಕೆ ಕೈಗೊಂಡಿಲ್ಲ ಎಂದು ಕೆಂಡಾಮಂಡಲ ರಾಗಿದ್ದಾರೆ, ಉಚ್ಚಾಟನೆ ಕ್ರಮಕ್ಕೆ ಅಪಾರ ಬೆಲೆ ತೆರಬಾಕಾಗುತ್ತದೆ ಎಂದು ಎಚ್ಚರಿಸಿರುವ ಪತ್ರಿಕಾ ಹೇಳಿಕೆ ಮಲ್ನಾಡ್ ಟಿ.ವಿ ಗೆ ಲಭ್ಯವಾಗಿದೆ. ಯಾರೋ ಹೇಳಿದ್ದನ್ನು ಕೇಳಿಕೊಂಡು ಸ್ವಾರ್ಥಕ್ಕಾಗಿ ಈ ಕ್ರಮ ತೆಗೆದುಕೊಂಡಿದ್ದೀರಿ ಇದು ನಿಮಗೆ ಶೋಭೆ ತರುವುದಿಲ್ಲ ಎಂದು ದೇವರಾಜ್ ಶೆಟ್ಟಿ ವಿರುದ್ಧ ತಿರುಗಿ ಬಿದ್ದಿದ್ದು, ಸೂಕ್ತ ವೇದಿಕೆಯಲ್ಲಿ ಇದನ್ನು ಪ್ರಶ್ನಿಸುತ್ತೇವೆ ಎಂದು ಎಚ್ಚರಿಕೆಯನ್ನು ಸಹಾ ಅನುಕುಮಾರ್ ಹಾಗೂ ಭರತ್ ರವಾನಿಸಿದ್ದಾರೆ. ಈ ನಡುವೆ ಖುದ್ದು ಸಂಸದೆ ಶೋಭಾ ಕರಂದ್ಲಾಜೆ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!