ರಾತ್ರಿಯಿಡಿ ಸುರಿದ ಮಳೆಗೆ ನೆಲಕ್ಕುರುಳಿದ ಮನೆ
1 min readಚಿಕ್ಕಮಗಳೂರು : ರಾತ್ರಿಯೆಲ್ಲ ಸುರಿದ ಮಳೆಗೆ ಮನೆಯೊಂದು ನೆಲಕ್ಕುರುಳಿದ್ದು, ಮನೆಯ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಳೆ ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕ್ರಿಶ್ಚಿಯನ್ ಕಾಲೂನಿಯಲ್ಲಿ ನಡೆದಿದೆ.
ಕಳೆದ ಒಂದು ವಾರದಿಂದ ನಗರದಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಕಳೆದ ರಾತ್ರಿಯು ಬಿಡುವಿಲ್ಲದೆ ಸುರಿದ ಮಳೆಗೆ ಮನೆಯ ಪಕ್ಕದಲ್ಲಿದ್ದ ಖಾಸಗಿ ಗ್ಯಾರೇಜ್ ಕಾಂಪೌಡ್ ಕುಸಿದು ಮನೆಯ ಮೇಲೆ ಬಿದಿದ್ದು, ಇದರಿಂದ ಮನೆಯು ಸಂಪೂರ್ಣ ಕುಸಿದು ಬಿದ್ದಿದೆ. ಇದರಿಂದ ಮನೆಯಲ್ಲಿದ್ದ ಟಿ.ವಿ, ಮಿಕ್ಸಿ ವಿದ್ಯುತ್ ಉಪಕರಣಗಳು ಸೇರಿದಂತೆ ಪೀಠೋಪಕರಣಗಳು ನಜ್ಜುಗುಜ್ಜಾಗಿದೆ. ಅಲ್ಲದೆ ಕುಟುಂಬಸ್ಥರು ಮನೆಯಲ್ಲಿದ್ದ ವೇಳೆ ಮನೆಯ ಗೋಡೆ ಕುಸಿದಿದ್ದು, ಒಬ್ಬರಿಗೆ ಕಾಲಿಗೆ ತೀವ್ರ ತರಹದ ಪೆಟ್ಟಾಗಿದ್ದು ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಗೋಡೆ ಬೆಳಗ್ಗಿನ ಜಾವ ಬಿದ್ದ ಪರಿಣಾಮದಿಂದ ಹೆಚ್ಚಿನ ಪ್ರಾಣಾಪಾಯಿಂದ ಪಾರಾಗಿದ್ದಾರೆ.
ಈ ಬಗ್ಗೆ ಮಾತನಾಡುವ ಸ್ಥಳೀಯರಾದ ಅಂಕಿತಾ ಈ ಹಿಂದೆಯೇ ಮನೆಯ ಒಂದು ಗೋಡೆ ಮಳೆಯಿಂದ ಬಿರುಕು ಬಿಟ್ಟಿದ್ದು, ಆಗಲೇ ಸ್ಥಳೀಯ ನಗರಸಭೆ ಸದಸ್ಯರಿಗೆ ಕರೆ ಮಾಡಿ ತಿಳಿಸಿದರು ಸ್ಥಳಕ್ಕೆ ಆಗಮಿಸಿ ಮುನ್ನೆಚ್ಚರಿಕೆ ವಹಿಸದ ಪರಿಣಾಮ ಇಂದು ಬಡ ಕುಟುಂಬ ಬೀದಿಗೆ ಬೀಳುವಂತಾಗಿದೆ ಎಂದು ದೂರಿದರು.
ಘಟನೆಯ ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲು ರಾಜಕಾಲುವೆ ಪಕ್ಕದಲ್ಲಿ ಇರುವ ಮನೆಗಳು ಅಪಾಯದ ಮುನ್ಸೂಚನೆ ನೀಡುತ್ತಿದ್ದು, ಮಳೆಗಾಲದಲ್ಲಿ ಈ ಮನೆಗಳು ವಾಸಯೋಗ್ಯವಾಗಿರುವುದಿಲ್ಲ. ಈ ಮನೆಗೆ ಹೊಂದಿಕೊಂಡಂತೆ ಇರುವ ಖಾಸಗಿ ಗ್ಯಾರೇಜಿನ ಕಾಂಪೌಡ್ ಶಿಥಿಲ ಅವಸ್ಥೆ ತಲುಪಿದ್ದು, ಮಾಲೀಕರು ಕಾಂಪೌಂಡನ್ನು ತೆರವುಗೊಳಿಸದಿದ್ದರೆ ನಾವೇ ತೆರವುಗೊಳಿಸುವ ಕೆಲಸ ಮಾಡುತ್ತೇವೆ. ಇಲ್ಲಿನ ನಿವಾಸಿಗಳಿಗೆ ತಾತ್ಕಾಲಿಕವಾಗಿ ಹಾಸ್ಟೇಲ್ಗಳಲ್ಲಿ ಸ್ಥಳಾವಕಾಶ ಮಾಡಿಕೊಡಲಿದ್ದು ನಂತರ ಶಾಶ್ವತ ಪರಿಹಾರ ಮಾಡಕೊಡಲಾಗುವುದು ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g