ವರುಣನ ಆರ್ಭಟಕ್ಕೆ ಶಾಲಾ- ಕಾಲೇಜುಗಳಿಗೆ ಮುಂದುವರಿದ ರಜೆ
1 min readಚಿಕ್ಕಮಗಳೂರು : ಕಾಫಿನಾಡಲ್ಲಿ ಮುಂದುವರಿದ ವರುಣನ ಅಬ್ಬರ ಜೋರಾಗಿದ್ದು, ಮಕ್ಕಳು ಶಾಲಾ – ಕಾಲೇಜುಗಳಿಗೆ ತೆರಳುವುದು ಕಷ್ಟ ಸಾಧ್ಯವಾಗಿದೆ. ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ಹೈರಣಾಗಿರುವ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧ್ಯಂತ ಇರುವ ಶಾಲಾ ಕಾಲೇಜುಗಳಿಗೆ 2 ದಿನಗಳ ಕಾಲ ರಜೆಯನ್ನು ಮುಂದುವರೆಸಿದೆ.
ಜಿಲ್ಲೆಯಲ್ಲಿ ಒಂದು ವಾರಗಳಿಂದ ಆರಂಭವಾದ ಮಳೆಯು ಜಿಲ್ಲೆಯ ಮಲೆನಾಡು ಭಾಗವಾದ ಚಿಕ್ಕಮಗಳೂರು ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಕಳಸ ತಾಲೂಕಿನಲ್ಲಿ ವರುಣ ತನ್ನ ರುದ್ರ ನರ್ತನವನ್ನು ತೋರಿಸುತ್ತಿದ್ದಾನೆ. ಇದರಿಂದ ಶಾಲಾ – ಕಾಲೇಜುಗಳಿಗೆ ಮಕ್ಕಳು ತೆರಳು ಸಾಧ್ಯವಾಗುತ್ತಿಲ್ಲ.
ಈ ಹಿಂದೆ ಬಿಡುವಿಲ್ಲದೆ ಸುರಿಯುತ್ತಿದ್ದ ಮಳೆಯ ಕಾರಣದಿಂದ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ರವರು ಜುಲೈ 6 ರಿಂದ ಜುಲೈ 9 ರವರೆಗೆ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆಯ ಆದೇಶವನ್ನು ನೀಡಿದ್ದರು. ಒಂದು ವಾರ ಕಳೆದರು ಮಳೆಯು ತನ್ನ ಆರ್ಭಟವನ್ನು ನಿಲ್ಲಿಸದೆ ತನ್ನ ಓಟವನ್ನು ಮುಂದುವರೆಸಿದ್ದು, ಮಲೆನಾಡು ಭಾಗಗಳಲ್ಲಿ ಹಳ್ಳ – ಕೊಳ್ಳಗಳು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಲೆನಾಡಿನ 6 ತಾಲೂಕುಗಳಾದ ಚಿಕ್ಕಮಗಳೂರು ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಕಳಸ ತಾಲೂಕುಗಳಿಗೆ ರಜೆಯನ್ನು ಜುಲೈ 11 ಮತ್ತು 12 ರ ದಿನಗಳ ಕಾಲ ಮುಂದುವರೆಸಿದ್ದು, ಶಾಲೆಯಲ್ಲದೆ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆಯನ್ನು ವಿಸ್ತರಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g