May 19, 2024

MALNAD TV

HEART OF COFFEE CITY

ಭಾರೀ ಮಳೆ ಬೆಳೆಗಾರರು ಕಂಗಾಲು ಅಪಾರ ಹಾನಿ

1 min read

ಚಿಕ್ಕಮಗಳೂರು: ಮಲೆನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಾಫಿ, ಕಾಳು ಮೆಣಸು, ಅಡಿಕೆ ಬೆಳೆ ರೋಗ ತಗಲುವ ಭೀತಿ ಬೆಳೆಗಾರರಲ್ಲಿ ಎದುರಾಗಿದೆ ಎಂದು ಜೆಡಿ ಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಕಳವಳ ವ್ಯಕ್ತಪಡಿಸಿದ್ದಾರೆ.ಶನಿವಾರ ಈ ಸಂಬoಧ  ಹೇಳಿಕೆ ನೀಡಿರುವ ಅವರು, ವರ್ಷದ ಆರಂಭದ ಫೆಬ್ರವರಿ, ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕಾಫಿ ಹೂವಿನ ಮಳೆ ಬಿದಿದ್ದು ಮೂರು ಹಂತದಲ್ಲಿ ಹೂವಾಗಿತ್ತು. ಜೂನ್, ಜುಲೈ ತಿಂಗಳಲ್ಲಿ ಕಾಫಿ ಈಚು ಕಟ್ಟುತ್ತಿದೆ. ಸದ್ಯ ಸುರಿಯುತ್ತಿರುವ ಭಾರೀಮಳೆ ಮತ್ತು ಶೀತದಿಂದ ಈಚು ಉದುರುವ ಭೀತಿ ಎದುರಾಗಿದೆ ಎಂದು ತಿಳಿಸಿದರು.

ಕಾಫಿಗೆ ಕೊಳೆರೋಗ ಪ್ರಾರಂಭವಾಗಿದೆ. ಗುಡ್ಡ ಕುಸಿತ ಭಯ ಕಾಡುತ್ತಿದೆ. ಆದರೆ ಕಾಫಿ ಮಂಡಳಿ ಅಧಿಕಾರಿಗಳು ಮತ್ತು ಕಾಫಿ ಮಂಡಳಿ ಸದಸ್ಯರು ಇಂತಹ ಸಂದರ್ಭದಲ್ಲೂ ಕೈಕಟ್ಟಿ ಕುಳಿತಿರುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಕಾಫಿ ಸಂಶೋಧನಾ ಕೇಂದ್ರ ವಿಜ್ಞಾನಿಗಳು ಪರಿಶೀಲಿಸಿ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಕೂಡಲೇ ಜಿಲ್ಲಾಧಿಕಾರಿಗಳು ವೀಕ್ಷಕರ ತಂಡಗಳನ್ನು ರಚಿಸಿ ಸತ್ಯಾಸತ್ಯತೆಯ ವರದಿ ಆಧoರಿಸಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲು ಸಹಕರಿಸಬೇಕು. ಬಯಲುಸೀಮೆ ಪ್ರದೇಶದಲ್ಲಿ ಬಿತ್ತನೆ ಕಾರ್ಯ ತೊಡಗಿದ್ದು, ಮಳೆಯಿಂದ ಬಿತ್ತನೆ ಬೀಜ ನೀರು ಪಾಲಾಗುವ ಸ್ಥಿತಿ ನಿರ್ಮಾ ಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ದಾವಿಸಿ ಪರಿಹಾರ ನೀಡಲು ಒತ್ತಡ ತರಬೇಕೆಂದು ಆಗ್ರಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!