ಮಳೆ, ಗಾಳಿ ಆರ್ಭಟಕ್ಕೆ ನೆಲಕ್ಕುರುಳಿದ ಮನೆ
1 min readಚಿಕ್ಕಮಗಳೂರು : ನಗರದಲ್ಲಿಯೂ ವರುಣನ ಆರ್ಭಟವು ಜೋರಾಗಿದ್ದು, ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯೊಂದಿಗೆ ಗಾಳಿಯು ವೇಗವಾಗಿ ಬೀಸುತ್ತಿದ್ದು, ಸತತ ಮಳೆಯ ಕಾರಣದಿಂದ ಗೋಡೆಗೆ ಶೀತ ಆವರಿಸುತ್ತಿದೆ. ಇದರಿಂದ ಬೀಕನಹಳ್ಳಿ ಗ್ರಾಮದಲ್ಲಿ ಮನೆಯೊಂದು ಧರೆಗೆ ಉರುಳಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ಬೀಕನಹಳ್ಳಿ ಗ್ರಾಮದ ರವಿ ಎಂಬವವರಿಗೆ ಸೇರಿದ ಮನೆಯು ಸತತ ಮಳೆ ಹಾಗೂ ವೇಗವಾದ ಗಾಳಿ ಕಾರಣದಿಂದ ಕುಸಿದು ಬಿದಿದ್ದೆ. ಕುಸಿದು ಬಿದ್ದ ಗೋಡೆಯು ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆಯ ಮೇಲೆ ಬಿದ್ದಿದ್ದು, ಅದೃಷ್ಟವಶತ್ ಕೊಟ್ಟಿಗೆಯಲ್ಲಿದ್ದ ಎರಡು ರಾಸುಗಳು ಜೀವ ಹಾನಿಯಿಂದ ಪಾರಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿಗಳಾದ ರುದ್ರೇಶ್ ಮಳೆಯಿಂದ ಬಿದ್ದ ಮನೆಯ ಹಾನಿಯ ಸಮಿಕ್ಷೆಯನ್ನು ನಡೆಸಿದ್ದಾರೆ, ಪರಿಹಾರಿಕ್ಕೆ ಕಛೇರಿಗೆ ಅರ್ಜಿ ನೀಡುವಂತೆ ಸೂಚಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g