May 5, 2024

MALNAD TV

HEART OF COFFEE CITY

2 ನೇ ದಿನವು ಸಿಗದ ಸೂರಿ ದೇಹ : ನಾಳೆಯು ಶೋಧ ಕಾರ್ಯಕಾಲು ಜಾರಿ ಹಳ್ಳಕ್ಕೆ ಬಿದ್ದ ಚಿಂದಿ ಹಾಯುತ್ತಿದ್ದ ಸೂರಿ

1 min read

ಚಿಕ್ಕಮಗಳೂರು : ನಗರದ ಉಂಡೆದಾಸರಳ್ಳಿ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಚಿಂದಿ ಹಾಯುವ ಸೂರಿಗಾಗಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾರ್ಗದರ್ಶನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು 2 ನೇ ದಿನವಾದ ಇಂದು ಸಹ ಶೋಧ ಕಾರ್ಯವನ್ನು ಮುಂದುವರೆಸಿದರು.

ಕಾಫೀ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸೂರಿ ಹಾಗೂ ಆತನ ಹೆಂಡತಿ ಕೂಲಿ ಕೆಲಸವಿಲ್ಲದೆ ನಗರದಲ್ಲಿ ಚಿಂದಿ ಹಾಯುವ ಕೆಲಸ ಮಾಡುತ್ತಿದ್ದರು. ನಿನ್ನೆ ಉಂಡೆದಾಸರಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ ಹಳ್ಳದ ಬದುವಿನಲ್ಲಿ ಸೂರಿ ಹಾಗೂ ಆತನ ಹೆಂಡತಿ ಚಿಂದಿ ಹಾಯುವಾಗ ಅಚಾನಕ್ಕಾಗಿ ಕಾಲು ಜಾರಿ ಹಳ್ಳಕ್ಕೆ ಬಿದಿದ್ದು, ಹೆಂಡತಿಯ ಆರ್ತನಾದದಿಂದ ಸ್ಥಳಿಯರ ಸಹಕಾರದಿಂದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸೂರಿಗಾಗಿ ಶೋಧ ಕಾರ್ಯ ಆರಂಭಿಸಿದರು. ನಿನ್ನೆ ಸೂರಿ ಸಿಗದೆ ಇರುವುದರಿಂದ ಸತತ 2ನೆ ದಿನವೂ ಮಳೆಯನ್ನು ಲೆಕ್ಕಿಸದೆ ನಗರಸಭೆ ಅಧ್ಯಕ್ಷ ವರಸಿದ್ಧಿ ನೇತೃತ್ವದಲ್ಲಿ ಎನ್.ಡಿ.ಆರ್.ಎಫ್. ತಂಡ, ನಗರ ಸಭೆಯ ಅಧಿಕಾರಿಗಳು, ಪೆÇಲೀಸ್ ಇಲಾಖೆ, ತಹಸೀಲ್ದಾರ್ ಹಾಗೂ ಸ್ಥಳೀಯ ನಗರ ಸಭಾ ಸದಸ್ಯರ ಸಹಕಾರದೊಂದಿಗೆ ಸೂರಿಯ ದೇಹಕ್ಕಾಗಿ ಹುಡುಕಾಟ ನಡೆಸಿದರು. ಎರಡನೇ ದಿನವು ಸೂರಿಯ ಪತ್ತೆ ಸಿಗದೆ ಇರುವುದರಿಂದ ಹುಡುಕಾಟವನ್ನು ನಾಳೆಯೂ ಮುಂದುವರೆಸುವುದಾಗಿ ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!