ಅದ್ಧೂರಿಯಾಗಿ ನಡೆಯಿತು ಕೇಕ್ ಮಿಕ್ಸಿಂಗ್ ಸೆರಮನಿ ಚಾಲನೆ ನೀಡಿದ ಪಲ್ಲವಿ ಸಿ.ಟಿ.ರವಿ
1 min readಚಿಕ್ಕಮಗಳೂರು ತಾಲೂಕಿನ ತ್ರಿವಿಕ್ ಹೋಟೆಲ್ ನಲ್ಲಿ ಕ್ರಿಸ್ ಮಸ್ ಹಬ್ಬದ ಅಂಗವಾಗಿ ಮೂರು ತಿಂಗಳ ಮೊದಲೇ ಕೇಕ್ ಮಿಕ್ಸಿಂಗ್ ಸೆರಮನಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ನಿಸರ್ಗ ಸೌಂದರ್ಯದ ಮಧ್ಯೆ ತಲೆಎತ್ತಿನಿಂತಿರುವ ತ್ರಿವಿಕ್ ಹೊಟೇಲ್ ಅಂಡ್ ರೇಸಾರ್ಟ್ ನಲ್ಲಿ ಕ್ರಿಸಮಸ್ ಹಬ್ಬಕ್ಕೆ ಈಗಲೇ ಸಿದ್ಧತೆ ನಡೆಸಿದೆ.ಡಿಸಂಬರ್ ೨೫ ರ ಕ್ರಿಸ್ ಮಸ್ ಗೆ ೧೦೦ ಕೆ.ಜಿ ರುಚಿ ಭರಿತ ಕೇಕ್ ತಯಾರಿಸಲು ಮುಂದಾಗಿದೆ. ಅದಕ್ಕೆ ಬೇಕಾಗುವ ಒಣ ದ್ರಾಕ್ಷಿ ಗೋಡಂಬಿ, ಚೇರಿಗೆ ಶುದ್ಧ ವೈನ್ ಸೇರಿದಂತೆ ಕೇಕ್ ಮಿಕ್ಸಿಂಗ್ ಕಾರ್ಯನಡೆಯಿತು. ಕಾರ್ಯಕ್ರಮಕ್ಕೆ ಪಲ್ಲವಿ ಸಿ.ಟಿ.ರವಿ ಚಾಲನೆ ನೀಡಿದರು. ಕ್ರಿಸ್ ಮಸ್ ತಾತಾ ನಗುಬೀರಿ, ಕೈಕುಲಕಿ ಅತಿಥಿಗಳೊಂದಿಗೆ ಹೆಜ್ಜೆ ಹಾಕಿದರು.ಶಾಸಕ ಸಿ.ಟಿ.ರವಿ ಪತ್ನಿ ಪಲ್ಲವಿ ರವಿ, ವೈದ್ಯರಾದ ಕಾರ್ತಿಕ್ವಿಜಯ್, ಭಾಗ್ಯಕಾರ್ತಿಕ್, ಅನಿಲ್, ಸೇರಿದಂತೆ ವಿವಿಧ ಕ್ಷೇತದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಪಲ್ಲವಿ ಸಿ.ಟಿ.ರವಿ ಇದೊಂದು ಹೊಸ ಅನುಭವ, ಹೊಸ ವರ್ಷದ ಆಚರಣೆ ಎಂದರೆ ಕೇಕ್ ತಂದು ಕತ್ತರಿಸುವುದು ಸಾಮಾನ್ಯ. ಅದನ್ನು ಸಿದ್ಧಪಡಿಸಲು ನಡೆಸಿದ ಮಿಶ್ರಣ ಕಾರ್ಯದಲ್ಲಿ ಭಾಗವಹಿಸಿದ್ದು ಖುಷಿ ನೀಡಿದೆ ಎಂದರು.
ರೆಸಾರ್ಟ್ನ ಜನರಲ್ ಮ್ಯಾನೇಜರ್ ಸ್ಯಾಮ್ ಪಿಲ್ಲಿಪ್ ಮಾತಾನಾಡಿ ಕೇಕ್ ತಯಾರಿಕೆಗೆ ೩ ತಿಂಗಳಿನಿಂದಲೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಒಣದಾಕ್ಷಿ, ಗೋಡಂಬಿ, ಚೆರಿಗಳನ್ನು ವೈನ್, ರಮ್ ಜೊತೆ ಮಿಶ್ರಣ ಮಾಡಿ ೧೫ ದಿನಗಳ ಕಾಲ ಇಟ್ಟು ಸಂಸ್ಕರಿಸಿ ಮತ್ತೊಮ್ಮೆ ಮಿಶ್ರನ ಮಾಡಿ ರುಚಿಕರ ಕೇಕ್ ಸಿದ್ಧಪಡಿಸಲಾಗುತ್ತದೆ. ೧೫ ಕೆ.ಜಿ.ಒಣ ಹಣ್ಣುಗಳನ್ನು ಬಳಸಲಾಗಿದೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g