May 5, 2024

MALNAD TV

HEART OF COFFEE CITY

ಪ್ರತಿಯೊಬ್ಬರು ಸ್ವಂತ ಉದ್ಯೋಗ ಆರಂಭಿಸಿ, ಇತರರಿಗೂ ಮಾದರಿ-ಮಾರ್ಗದರ್ಶಿಯಾಗಬೇಕು : ಗುಣನಾಥ ಸ್ವಾಮೀಜಿ

1 min read

ಚಿಕ್ಕಮಗಳೂರು : ಪ್ರತಿಯೊಬ್ಬರು ಸ್ವಂತ ಉದ್ಯೋಗ ಮಾಡಿಕೊಂಡು ಸಮಾಜದ ಇತರರಿಗೂ ಮಾದರಿ ಹಾಗೂ ಮಾರ್ಗದರ್ಶಕರಾಗಬೇಕೆಂದು ಆದಿಚುಂಚನಗಿರಿ ಶಾಖಾ ಮಠದ ಶೃಂಗೇರಿ ಶ್ರೀಗಳಾದ ಗುಣನಾಥ ಸ್ವಾಮೀಜಿ ಹೇಳಿದರು. ಅವರು ಇಂದು ನಗರದ ಎಐಟಿ ವೃತ್ತದಲ್ಲಿ ನೂತನವಾಗಿ ಆರಂಭವಾಗಿರುವ “ಕೇಕ್ ಆಫ್ ದಿ ಡೇ” ಕೇಕ್ ಕಾರ್ನರ್ ಉದ್ಘಾಟಿಸಿ ಮಾತನಾಡಿದರು. ಸ್ವಂತ ಉದ್ಯೋಗ ಮಾಡುವುದರ ಜೊತೆ ಸಮಾಜಮುಖಿ ಕೆಲಸದಲ್ಲೂ ತೊಡಗಿಸಿಕೊಳ್ಳುವುದು ಬದುಕಿನ ಸಾರ್ಥಕತೆ ಎಂದು ತಿಳಿಸಿದರು. ಸರ್ಕಾರ ಪ್ರತಿಯೊಬ್ಬರಿಗೆ ಸರ್ಕಾರಿ ಕೆಲಸ ನೀಡಲು ಸಾಧ್ಯವಿಲ್ಲ. ಉನ್ನತ ಶಿಕ್ಷಣ ಪಡೆದು ಸ್ವಂತ ಉದ್ಯೋಗ ಮಾಡುವುದರಿಂದ ಮತ್ತೊಬ್ಬರಿಗೆ ಮಾದರಿ ಹಾಗೂ ಮಾರ್ಗದರ್ಶಕರಾಗಿ ಬದುಕಬಹುದು ಎಂದರು. ಕೇಕ್ ಆಫ್ ದಿ ಡೇನ ಪಾಲುದಾರ ಪೃಥ್ವಿ ಮಾತನಾಡಿ, ರೈತರ ಮಗನಾಗಿ ಹುಟ್ಟಿದ ಸತೀಶ್ ಗೌಡರ ಅವರು ಸ್ವಂತ ಕಂಪನಿ ನಿರ್ಮಿಸಿ ಅನೇಕರಿಗೆ ಉದ್ಯೋಗ ಕೊಡುವ ಉದ್ದೇಶದಿಂದ ಬಾಂಬೆಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬಂದು 2012-13ರಿಂದ ಕೇಕ್ ಆಫ್ ದಿ ಡೇ ಎಂಬ ಕಂಪನಿ ಆರಂಭಿಸಿ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರದಲ್ಲೂ 12ಕ್ಕೂ ಹೆಚ್ಚು ಶಾಖೆಗಳನ್ನ ಆರಂಭಿಸಿದ್ದಾರೆ. ಈ ಕಂಪನಿ ಜನಪ್ರಿಯಗೊಂಡ ಮೇಲೆ ಮೈಸೂರು ಹಾಗೂ ಚಿಕ್ಕಮಗಳೂರಿನಲೂ ಬ್ರಾಂಚ್‍ಗಳನ್ನ ಆರಂಭಿಸಿದ್ದಾರೆ ಎಂದರು. ಕೇಕ್ ಆಫ್ ದಿ ಡೇ ಹೊಸ ಕಾರ್ನರ್ ಆಗಿರುವುದರಿಂದ ಒಂದು ಕೇಕ್ ಕೊಂಡರೇ ಮತ್ತೊಂದು ಕೇಕ್ ಉಚಿತ ಎಂದು ಆಫರ್ ನೀಡಿದ್ದಾರೆ. ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯಲ್ಲಿದ್ದ ಈ ಕೇಕ್ ಆಫ್ ದಿ ಡೇ ಸಾರ್ವಜನಿಕರ ಅಚ್ಚುಮೆಚ್ಚಿನ ಕಾರ್ನರ್ ಆಗಿತ್ತು. ಇದೀಗ, ವಿಭಿನ್ನ ಬಗೆಯ ಸಿಹಿಯ ಖಾದ್ಯ ನೀಡುವ ಈ ಕೇಕ್ ಆಫ್ ದಿ ಡೇ ಎಐಟಿ ವೃತ್ತದಲ್ಲೂ ಆರಂಭವಾಗಿರೋದು ನಗರದ ಜನರಿಗೆ ಖುಷಿ ತಂದಿದೆ. ಕಾರ್ಯಕ್ರಮದಲ್ಲಿ ಎಐಟಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಟಿ.ಜಯದೇವ್, ಐ.ಡಿ.ಎಸ್.ಜಿ ಕಾಲೇಜಿನ ಉಪಾನ್ಯಾಸಕರಾದ ಹೆಚ್.ಎಂ.ಮಹೇಶ್, ಬೇಲೂರು ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಎಚ್.ಮಹೇಶ್, ಮಾಲೀಕರಾದ ಸತೀಶ್‍ಗೌಡ ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!