ಕಾರಿನ ಮೇಲೆ ಆಶ್ಲೀಲ ಬರಹ:ಕೊಲೆ ಬೆದರಿಕೆ: ಪೊಲೀಸರ ದಿಡೀರ್ ಕಾರ್ಯಚರಣೆಯಿಂದ ಆರೋಪಿಗಳು ಪತ್ತೆ
1 min read
ಕಡೂರು: ಕಡೂರು ಪಟ್ಟಣದಲ್ಲಿ ಇದೇ ತಿಂಗಳು 24ರಂದು ತಡರಾತ್ರಿ ಲಕ್ಷ್ಮೀಶ್ ನಗರದ ವಾಸಿ ಚಾರ್ಟೆಡ್ ಇಂಜಿನಿಯರ್ ಡಾ// ಶಶಿಧರ್ ಎಂಬುವರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ವಿಕೃತ ಮೆರೆದ ಕಿಡಿಗೇಡಿಗಳು ಆಶ್ಲೀಲ ಬರಹದೊಂದಿಗೆ ಕೊಲೆ ಬೆದರಿಕೆ ಪದ ಬರೆದಿದ್ದಾರೆ.
ಇದೇ ವೇಳೆ, ಕಾರಿನ ನಾಲ್ಕು ಚಕ್ರಗಳಲ್ಲಿ ಗಾಳಿ ಬಿಟ್ಟು, ಬಾನೆಟ್, ಗ್ಲಾಸ್ ಮತ್ತು ಎಡ ಡೋರ್ ಮೇಲೆ ಕಲ್ಲಿನಿಂದ ಗೀಚಿ ವಿಕೃತಿ ಮೆರೆದಿದ್ದಾರೆ.
ಈ ಕುರಿತು ಬೆಳಿಗ್ಗೆ 25ನೇ ತಾರೀಖು ಪೊಲೀಸರಿಗೆ ನೀಡಿದ್ದು, ದೂರಿನನ್ವಯ ಕಡೂರು ಪೊಲೀಸ್ ಠಾಣಾ ಮೊ. ನಂ. 202/2022 ಕಲಂ 427, 505(2), 506 ಐಪಿಸಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದರು. ಶ್ರೀಮತಿ. ರಮ್ಯ ಎನ್. ಕೆ., ಪಿ.ಎಸ್.ಐ., ಕಡೂರು ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ರಚಿಸಿದ ಪೊಲೀಸ್ ತಂಡ ಸಾಂಧರ್ಬಿಕ ಸಾಕ್ಷ್ಯಗಳ ಆಧಾರದ ಮೇರೆಗೆ 48 ಗಂಟೆಯೊಳಗಾಗಿ ಈ ಕೃತ್ಯವನ್ನು ಎಸಗಿದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಘಟನೆಯಲ್ಲಿ ಬಾಗಿಯಾಗಿದ್ದಾರೆನ್ನಲಾದ ಅಪ್ರಾಪ್ತ ಬಾಲಕರು ಘಟನೆ ನಡೆದ ರಾತ್ರಿ ಕಡೂರಿನಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮ ನೋಡಿಕೊಂಡು ವಾಪಸ್ಸು ಹೋಗುತ್ತಿದ್ದಾಗ ರಸ್ತೆ ಬದಿ ನಿಲ್ಲಿಸಿದ್ದ ಕಾರು ಗಮನಿಸಿ, ‘ಈ ತರಹದ ಕಾರನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆಗದಿದ್ದರೂ ಪರವಾಗಿಲ್ಲ, ಇದನ್ನು ಹಾಳು ಮಾಡೋಣ’ ಎಂದು ವಿಕೃತಿ ಮೆರೆದಿದ್ದಾರೆ ಎಂಬುದು ಮೇಲುನೋಟಕ್ಕೆ ಕಂಡು ಬಂದಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g