May 2, 2024

MALNAD TV

HEART OF COFFEE CITY

ಶರಣಾಗತಿಗೊಂಡ ಹಂದಿ ಅಣ್ಣಿ ಹತ್ಯೆ ಆರೋಪಿಗಳು

1 min read

ಚಿಕ್ಕಮಗಳೂರು : ಹಂದಿ ಅಣ್ಣಿ ಹತ್ಯೆ 8 ಜನ ಆರೋಪಿಗಳು ಜೀವ ಭಯದಿಂದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಶರಣಾಗಿದ್ದಾರೆ.

ಶಿವಮೊಗ್ಗದಲ್ಲಿ ರೌಡಿ ಶೀಟರ್ ಹಂದಿ ಹತ್ಯೆಯ ಪ್ರಮುಖ ಆರೋಪಿಗಳು ಜೀವ ಭಯದಿಂದ ಚಿಕ್ಕಮಗಳೂರಿಗೆ ಬಂದ 8 ಜನ ಆರೋಪಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಶರಣಾಗಿದ್ದ ಇವರನ್ನು ನಗರ ಪೊಲೀಸ್ ಠಾಣೆಯಲ್ಲಿ ಕರೆ ತಂದು ಅಲ್ಲಿ ಕಾನೂನು ಕ್ರಮಗಳ ನಂತರ ಬಂಧಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್. ಅಕ್ಷಯ್ ಹಂದಿ ಅಣ್ಣಿ ಹತ್ಯೆ ಮಾಡಿದ 8 ಮಂದಿ ಆರೋಪಿಗಳು ನಮ್ಮಲ್ಲಿ ಶರಣಾಗಿದ್ದಾರೆ. ಹತ್ಯೆ ಬಳಿಕ ಎಲ್ಲೆಲ್ಲಿ ಹೋಗಿದ್ರು, ಏನೇನು ಮಾಡಿದ್ರು ಎಲ್ಲವನ್ನು ತಿಳಿಸಿದ್ದಾರೆ. ಚಿಕ್ಕಮಗಳೂರಿಗೆ ಯಾಕೆ ಬಂದ್ರು ಎಂಬ ವಿಚಾರವನ್ನು ಹೇಳಿರುವ ಅವರು, ಶಿವಮೊಗ್ಗಕ್ಕೆ ಹೋದರೆ ನಮಗೆ ಭಯವಿದೆ, ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ನಮ್ಮನ್ನ ಶರಣಾಗತಿ ಎಂದು ಪರಿಗಣಿಸಿ ಎಂದು ನಮ್ಮ ಬಳಿ ಮನವಿ ಮಾಡಿಕೊಂಡ್ರು. ಸಿಕ್ಕಿರುವ ಮಾಹಿತಿ ಪ್ರಕಾರ ಇವರೇ ಆರೋಪಿಗಳು ಎಂಬುದು ಮೇಲ್ನೋಟಕ್ಕೆ ಖಚಿತವಾಗಿದೆ. ನಮ್ಮಲ್ಲಿ ಶರಣಾಗತಿ ಆದ ಬಳಿಕ ಆರೋಪಿಗಳ ಬಗ್ಗೆ ಶಿವಮೊಗ್ಗ ಪೊಲೀಸರಿಗೆ ತಿಳಿಸಿದ್ದೇವೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!