ಸಿ.ಟಿ. ರವಿ ಹುಟ್ಟು ಹಬ್ಬ ಅಂಗವಾಗಿ ಸವಿತಾ ಸ್ವಸಹಾಯ ಸಂಘದಿಂದ ನಿರ್ಗತಿಕರಿಗೆ ಉಪಹಾರ
1 min readಚಿಕ್ಕಮಗಳೂರು : ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಚಿಕ್ಕಮಗಳೂರು ಕ್ಷೇತ್ರದ ಶಾಸಕರಾದ ಸಿ.ಟಿ. ರವಿಯವರ 55 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ, ಸವಿತಾ ಸ್ವಸಹಾಯ ಸಂಘ, ಮಡಿವಾಳ ಸಂಘ ಹಾಗೂ ಕುರುಬ ಸಂಘದ ನೇತೃತ್ವದಲ್ಲಿ ನಿರ್ಗತಿಕರಿಗೆ ಉಪಹಾರವನ್ನು ನೀಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷವು ಶಾಸಕರಾದ ಸಿ.ಟಿ. ರವಿಯವರ ಹುಟ್ಟು ಹಬ್ಬದ ಅಂಗವಾಗಿ ಬೀದಿ ಬದಿ ಇರುವ ನಿರ್ಗತಿಕರಿಗೆ ಬೆಳಗ್ಗಿನ ಉಪಹಾರವನ್ನು ನೀಡಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ವಿಶ್ವನಾಥ, ತಾಲೂಕು ಅಧ್ಯಕ್ಷ ಜೆ. ಸತ್ಯನಾರಾಯಣ, ಕಾರ್ಯದರ್ಶಿ ಆಲೂರು ಎನ್ ಸತೀಶ್, ಗೌರವಾಧ್ಯಕ್ಷ ಟಿ. ಲಕ್ಷ್ಮಿಕಾಂತ್, ಮೆಹಬೂಬ್, ಡಿ.ಎನ್. ಉಮೇಶ್, ಕುರುಬ ಸಮಾಜದ ಜೆ.ಆರ್. ಕುಮಾರ್, ಮಡಿವಾಳ ಸಮಾಜದ ಮಂಜುನಾಥ್, ಶ್ರೀಕಾಂತ್ ನಾವಿ, ತೇಗೂರು ವಿಜಯ್ ಕುಮಾರ್, ಅಂಬಳೆ ಸಿದ್ದರಾಜ್, ಡೋಲ್ ವಿ. ಮಂಜುನಾಥ್ ಮುಂತಾದವರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g