May 4, 2024

MALNAD TV

HEART OF COFFEE CITY

ಮೀಸಲಾತಿ ಜಗಳಕ್ಕೆ ಒಳ ಮೀಸಲಾತಿಯೊಂದೇ ಪರಿಹಾರ ಎಂ.ಪಿ ಕುಮಾರಸ್ವಾಮಿ

1 min read

ಚಿಕ್ಕಮಗಳೂರು : ಮೀಸಲಾತಿ ಜಗಳಕ್ಕೆ ಒಳಮೀಸಲಾತಿಯೊಂದೇ ಪರಿಹಾರ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಮೂಡಿಗೆರೆಯಲ್ಲಿ ಮಾತನಾಡಿರೋ ಅವರು, 2ಎನಲ್ಲಿ 264 ಜಾತಿಗಳು ಇವೆ. ಟ್ರಡಿಷನ್ ರೀತಿ ಆ ಸೌಲಭ್ಯ ಹಾಗೂ ಮೀಸಲಾತಿಯನ್ನ ಅವರು ಪಡೆಯುತ್ತಿದ್ದಾರೆ. ಅಲ್ಲಿಗೆ ಪಂಚಮಸಾಲಿಗಳನ್ನ ಸೇರಿಸುವುದರಿಂದ ಅವರ ಅವಕಾಶಗಳು ಕೈತಪ್ಪುವ ಸಂಭವ ಹೆಚ್ಚಿದೆ. ಎಸ್ಟಿಗೆ ಕುರುಬರನ್ನ ಸೇರಿಸಿ ಎಂದು ಕೇಳುತ್ತಿದ್ದಾರೆ. ಪಾರಂಪರಿಕ ಎಸ್ಟಿಗಳಿಗೆ ಕುರುಬರನ್ನ ಸೇರಿಸುವುದರಿಂದ ಅವರಿಗೂ ಕೂಡ ಅವಕಾಶಗಳು ಹಾಗೂ ಮೀಸಲಾತಿ ಕೈತಪ್ಪಬಹುದು. ಇದಕ್ಕೆಲ್ಲಾ ಪರಿಹಾರ ಏನೆಂದ್ರೆ ಒಳಮೀಸಲಾತಿ ಮಾಡಬೇಕು ಎಂದಿದ್ದಾರೆ. ಆ ಜನಾಂಗಕ್ಕೆ ಮೀಸಲಾತಿ ನೀಡುವಾಗ ಒಳಮೀಸಲಾತಿ ಮಾಡಬೇಕು. ಎಸ್ಸಿಗಳಿಗೆ ಇವತ್ತು ಯಾವ ಅವಕಾಶಗಳು ಸಿಗುತ್ತಿಲ್ಲ. ತಿದ್ದುಪಡಿಯಾದ ಎಸ್ಟಿಗಳಿಗೆ ಮೀಸಲಾತಿ ಸಿಗುತ್ತಿದ್ದು, ಟ್ರಡಿಷನ್ ಎಸ್ಸಿಗಳಿಗೆ ಮೀಸಲಾತಿ ಸಿಗುತ್ತಿಲ್ಲ. ತಿದ್ದುಪಡಿ ಎಸ್ಸಿಗಳಿಗೆ ಸಿಗುತ್ತಿದೆ. ಈ ಅಪಾಯ ಎಲ್ಲಾ ವರ್ಗಕ್ಕೂ ಆಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಇದಕ್ಕೆ ಒಳಮೀಸಲಾತಿ ಮಾಡುವುದೇ ಪರಿಹಾರ ಎಂದಿದ್ದಾರೆ. ಆದರೆ, ಮೀಸಲಾತಿ ಕೋಡೋದು-ಬಿಡೋದು ಸಿಎಂ ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ. ಅವರು ಹೇಗೆ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಅಪಾಯವಂತೂ ಇದ್ದೇ ಇದೆ ಎಂದಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!