ಅಭಿಮಾನಿಗಳ ಹೆಸರಿನಲ್ಲಿ ಚಿತ್ರಿಕರಣ ಸ್ಥಳದಲ್ಲಿ ಘೇರಾವ್ ಹಾಕಿರುವುದು ಖಂಡನೀಯ
ಚಿಕ್ಕಮಗಳೂರು : ಕನ್ನಡ ನಟರ ನಡುವಿನ ಇತ್ತಿಚ್ಚಿನ ವಿದ್ಯಮಾನಗಳನ್ನು ಗಮನಿಸುತ್ತಿದ್ದು, ಕೆಲವು ಕನ್ನಡ ನಟರ ಅಭಿಮಾನಿಗಳು ಅತಿರೇಕದ ವರ್ತನೆಯನ್ನು ತೋರಿಸುತ್ತಿದ್ದಾರೆ. ಇದನ್ನು ಖಂಡಿಸಿ ಕನ್ನಡ ಸೇನೆ ಕಛೇರಿಯಲ್ಲಿ ಇಂದು ಪೂರ್ವಭಾವಿ ನಡೆಸಿ ಎಲ್ಲರೂ ಸಹ ಖಂಡಿಸಿದರು.
ಸಭೆಯ ನಂತರ ಮಾತನಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಾಜೇಗೌಡ, ನಟರ ನಡುವೆ ಯಾವುದೇ ರೀತಿಯ ವೈಮನಸ್ಸುಗಳಿದ್ದರೆ ಅಥವಾ ವೈಯುಕ್ತಿಕ ಬಿನ್ನಾಭಿಪ್ರಾಯಗಳಿದ್ದರೆ ಅದನ್ನು ಫಿಲಂ ಛೇಂಬರ್ನಲ್ಲಿ ದೂರು ನೀಡಿ ಬಗೆಹರಿಸಿಕೊಳ್ಳಬಹುದು. ಆದರೆ ಅಭಿಮಾನಿಗಳೆಂದು ಎಂದು ಹೇಳಿಕೊಂಡು ನಟ ಜಗ್ಗೇಶ್ ಇರುವ ಕಡೆ ಹೋಗಿ ಘೆರಾವ್ ಹಾಕುವುದು ಅಭಿಮಾನಿಗಳಿಗೆ ಶೋಬೆ ತರುವುದಿಲ್ಲ, ಇದು ಮರುಕಳಿಸಿದರೆ ದೂರು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ನೆರೆಯ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುತ್ತಿರುವ ಪ್ರವಾಸಿಗರ ಮೇಲೆ ನಿರ್ಬಂಧ ಏರಬೇಕೆಂದು ಒತ್ತಾಯಸಿದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g