May 5, 2024

MALNAD TV

HEART OF COFFEE CITY

ನಿವೇಶನ ವಂಚಿತ ನಿರಾಶ್ರಿತರಿಗೆ ನಿವೇಶನಕ್ಕಾಗಿ ಒತ್ತಾಯಿಸಿ ಧರಣಿ

1 min read

ಚಿಕ್ಕಮಗಳೂರು : 2019 ರಲ್ಲಿ ಬೆಳಗ್ಗಿನ ಆಝವ ಏಕಾಏಕಿ ಪೊಲೀಸರೊಂದಿಗೆ ದಾಳಿ ಮಾಡಿ ನಿದ್ರೆಯಲ್ಲಿದ್ದ ಅಮಾಯಕ ಬಡವರನ್ನು ಬಲವಂತವಾಗಿ ನಗರ ಸಭೆ ಅಧಿಕಾರಿಗಳು ಖುಲ್ಲಾಗೊಳಿ ಎರಡು ವರ್ಷಗಳೆ ಕಳೆದರು ನಿವೇಶನ ವಂಚಿತರಿಗೆ ನಿವೇಶನ ನೀಡದಿರುವುದನ್ನು ಖಂಡಿಸಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಸರ್ಕಾರವು ಇದುವರೆಗೆ ಭೂಮಿ ಮತ್ತು ನಿವೇಶನ ರಹಿತರಿಗೆ ಭೂಮಿ ಮತ್ತು ನಿವೇಶನವನ್ನು ನೀಡಿರುವುದಿಲ್ಲ. ಗುಡಿಸಲಿನಲ್ಲಿದ್ದ ಜನರನ್ನು ರಾತ್ರೋರಾತ್ರಿ ಏಕಾಏಕಿ ಖಾಲಿ ಮಾಡಿಸಿ ಬೀದಿಗೆ ತಳ್ಳಿದ್ದಾರೆ. ಬಾಡಿಗೆ ಮನೆಗೆ ಬಾಡಿಗೆ ಕಟ್ಟಲಾಗದೆ ಇರುವುದರಿಂದ ಮನೆಯ ಮಾಲೀಕರು ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದ ಬೀದಿ ಬದಿಯಲ್ಲಿ ವಾಸ ಮಾಡುವ ಪರಿಸ್ಥಿತಿ ಬಂದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಕೂಡಲೇ ನಿವೇಶನ ರಹಿತರ ಮಾಪನ ಮಾಡಿ ನಿಜವಾದ ಭೂರಹಿತರಿಗೆ ಹಾಗೂ ವಸತಿ ರಹಿತರಿಗೆ ಕೂಡಲೇ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!