May 14, 2024

MALNAD TV

HEART OF COFFEE CITY

80 ಕೆ.ಜಿ. ತೂಕ 15 ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆ !!!!

1 min read

ಚಿಕ್ಕಮಗಳೂರು : 

ಸುಮಾರು 80 ಕೆ.ಜಿ. ತೂಕ 15 ಅಡಿ ಉದ್ದದ ಬೃಹತ್ ಹೆಬ್ಬಾವನ್ನ ಸೆರೆಹಿಡಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ನಡೆದಿದೆ.

ಸೆರೆ ಹಿಡಿದ ಈ ಹೆಬ್ಬಾವನ್ನ ಚೀಲಕ್ಕೆ ತುಂಬಲು ಮೂರು ಜನ ದೇಹದ ಶಕ್ತಿಯನ್ನೆಲ್ಲಾ ಬಿಟ್ಟು ಎತ್ತಿದ್ದಾರೆ. ಸೋಮಲಾಪುರ ಗ್ರಾಮದ ಉಮೇಶ್ ಭಟ್ ಎಂಬುವರ ತೋಟದಲ್ಲಿ ಈ ಹೆಬ್ಬಾವನ್ನ ಸೆರೆ ಹಿಡಿದಿದ್ದಾರೆ. ಉಮೇಶ್ ಅವರ ಕಾಫಿ ತೋಟದಲ್ಲಿ ಗಿಡಘಂಟೆ ಬೆಳೆದಿತ್ತು. ಗಿಡಘಂಟೆಯನ್ನ ಕಡಿಯುವಾಗ ಕೂಲಿ ಕಾರ್ಮಿಕ ಮಹಿಳೆ ಹೆಬ್ಬಾವಿನ ತಲೆ ಪಕ್ಕದಲ್ಲೇ ಕಾಲಿಟ್ಟಿದ್ದರು. ಅದು ಒದ್ದಾಡುವುದನ್ನ ಕಂಡು ಭಯದಿಂದ ಓಡಿದ್ದಾರೆ. ಸ್ಥಳಕ್ಕೆ ಬಂದ ಉರಗತಜ್ಞ ಹರೀಂದ್ರ ಸುಮಾರು ಅರ್ಧ ಗಂಟೆಗಳ ಕಾಲ ಪ್ರಯತ್ನ ನಡೆಸಿ ಹೆಬ್ಬಾವನ್ನ ಸೆರೆ ಹಿಡಿದಿದ್ದಾರೆ. ಹಾವು ಕೆಳಗೆ ಮಲಗಿದಾಗ ಒಂದು ತೆಂಗಿನ ಮರದಿಂದ ಕಾಣುತ್ತಿತ್ತು ಅಂತಾರೆ ಉರಗತಜ್ಞ. ಭಾರೀ ಗಾತ್ರದ ಈ ಹೆಬ್ಬಾವು ಮನುಷ್ಯನನ್ನ ಸಲೀಸಾಗಿ ನುಂಗುವಂತಿತ್ತು ಅಂತಾರೆ ಹರೀಂದ್ರ. ಸಾಮಾನ್ಯವಾಗಿ ಹೆಬ್ಬಾವು ಜೋರಿರುತ್ತವೆ. ಹಿಡಿದ ಕೂಡಲೇ ಹೇಗೆ ಬೇಕೋ ಹಾಗೇ ಸುತ್ತಿಕೊಳ್ಳುತ್ತವೆ. ಆದರೆ, ಈ ಹೆಬ್ಬಾವು ಹಿಡಿದು ಚೀಲಕ್ಕೆ ತುಂಬಲು ಮೂರು ಜನ ಹಿಡಿದು ಎತ್ತಿದರೂ ಯಾವುದೇ ರೀತಿಯಲ್ಲೂ ಪ್ರತಿರೋಧ ತೋರಲಿಲ್ಲ ಎಂದಿದ್ದಾರೆ. ಬಹುಶಃ ಅದು ಉಪವಾಸದಿಂದ ನಿತ್ರಾಣಗೊಂಡಿರಬಹುದು. ಉಪವಾಸವಿದ್ದ ಕಾರಣ ಯಾವುದೇ ರೀತಿ ಪ್ರತಿರೋಧ ತೋರದಿರಬಹುದು ಎಂದಿದ್ದಾರೆ. ಹಾವನ್ನ ಸೆರೆ ಹಿಡಿಯುವಾಗ ಸುತ್ತಲೂ ನಿಂತಿದ್ದ ಜನ ಸೆರೆ ಹಿಡಿದ ಬಳಿಕ ಹೆಬ್ಬಾವಿನ ಗಾತ್ರ ಕಂಡು ದೂರದಲ್ಲಿ ನಿಂತೇ ಗಾಬರಿಯಾಗಿದ್ದಾರೆ. ಸೆರೆ ಹಿಡಿದ ಹೆಬ್ಬಾವನ್ನ ಸ್ನೇಕ್ ಹರೀಂದ್ರ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಸ್ಥಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.

 

ಶಾಸಕ ಸಿ. ಟಿ.ರವಿ ಹಾಗೂ ಸಾರ್ವಜನಿಕರ ನಡುವೆ ಜಟಾಪಟಿ .!! ಕಾರಣ ಏನು ಅಂತ ಗೊತ್ತಾ ?

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!