May 2, 2024

MALNAD TV

HEART OF COFFEE CITY

ಯಡಿಯೂರಪ್ಪ ಲೋಕಸಭಾ ಟಿಕೆಟ್’ಗೆ ಬೆಂಬಲ ಬೆನ್ನಲ್ಲೇ ಶೋಭಾ ಕರಂದ್ಲಾಜೆ ನಿರಾಳ

1 min read

ಚಿಕ್ಕಮಗಳೂರು: ಯಡಿಯೂರಪ್ಪ ಬೆಂಬಲ ಬೆನ್ನಲ್ಲೇ ಶೋಭಾ ಕರಂದ್ಲಾಜೆ ಲೋಕಸಭಾ ಟಿಕೆಟ್ ಫೈಟ್ ವಿಚಾರದಲ್ಲಿ ಕೊಂಚ ನಿರಾಳರಾದಂತೆ ಕಂಡ ಬಂತು. ಈ ನಡುವೆ ಗೋ ಬ್ಯಾಕ್ ಮಾಡಿಸಿದವರ ಹಣದ ಮದ ದರ್ಪ ಅಹಂಕಾರ ಗಂಡಸು ಎಂಬ ಅಧಿಕಾರ ದಾಹ ಹೀಗೆಲ್ಲ ಮಾಡಿಸುತ್ತಿದ್ದು ಹೈ ಕಮಾಂಡ್ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಶೋಭಾ ಹೇಳಿದ್ದಾರೆ.

ಬಿಜೆಪಿ ಲೋಕಸಭಾ ಟಿಕೆಟ್ ಫೈಟ್ ನಡೆಯುತ್ತಿರುವ ನಡುವೆ ನಿನ್ನೆಯಷ್ಟೆ ಮಾಜಿ ಸಿ.ಎಂ ಯಡಿಯೂರಪ್ಪ ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್ ಎಂದು ಹೇಳಿದ ಬೆನ್ನಲ್ಲೇ ನಗರದಲ್ಲಿ ಇಂದು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ ಗೋ ಬ್ಯಾಕ್ ಮಾಡಿಸಿದವರಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ. ಹಣವಿದೆ ಎಂಬ ಅಹಂಕಾರ, ದರ್ಪ , ದುಡ್ಡಿನ ಮದ ಹೀಗೆಲ್ಲಾ ಮಾಡಿಸುತ್ತಿದ್ದು ಗಂಡಸರಿಗೆ ನನ್ ಹತ್ರಾನೇ ಎಲ್ಲಾ ಅಧಿಕಾರ ಇರಬೇಕು ಎಂಬದು ಇರುತ್ತೆ ಎಂದು ಪರೋಕ್ಷವಾಗಿ ಟಿಕೆಟ್ ತಪ್ಪಿಸಲು ಪ್ರಯತ್ನಿಸುತ್ತಿರವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ. ಏನೇ ಷಡ್ಯಂತ್ರ ನಡೆಸಿದರೂ ಹಿರಿಯರು ನನ್ನ ಜೊತೆ ಇದ್ದಾರೆ ಎಂದು ಯಡಿಯೂರಪ್ಪಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಮಾತನಾಡಿದ್ರು ಜೊತೆಗೆ ಬಿಜೆಪಿ ಪಕ್ಷದ ಹೈ ಕಮಾಂಡ್ ಗೆ ಗೋ ಬ್ಯಾಕ್ ನಡೆಸಿದವರ ಬಗ್ಗೆ ಸಂಪೂರ್ಣ ವರದಿ ತಲುಪಿದ್ದು, ಕೇಂದ್ರ ವರಿಷ್ಟರು ಎಲ್ಲದಕ್ಕೂ ಉತ್ತರ ಕೊಡುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ರಾಜಕೀಯದಲ್ಲಿ ಏಳು ಬೀಳು ಇರುತ್ತದೆ ಇದರ ನಡುವೆ ಭ್ರಷ್ಟಾಚಾರ ಮಾಡದೇ ಕೆಲಸ ಮಾಡಿದ್ದೇನೆ, ಕೇಂದ್ರದ ಯೋಜನೆಗಳನ್ನು ಉಡುಪಿ ಚಿಕ್ಕಮಗಳೂರು ಎರಡೂ ಜಿಲ್ಲೆಗೆ ತಂದಿದ್ದೇನೆ ಎಂದರು. ನಾನು ರಾಜ್ಯ ರಾಜಕಾರಣದಲ್ಲಿ ಇದ್ದಾಗಲೂ ಷಡ್ಯಂತ್ರ ಇತ್ತು ಎಂದಿರುವ ಶೋಭಾ ಕರಂದ್ಲಾಜೆ ಹೇಳಿದರು.

ಈ ನಡುವೆ ಪದೇ ಪದೇ ನಾನು ಕೇಂದ್ರ ಸರ್ಕಾರದಿಂದ ತಂದಿರುವ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿ ಮಾಡಿಸುತ್ತಿರುವ ಕಂಟ್ರಾಕ್ಟರ್ ಯಾರು ಎಂಬುದನ್ನು ನಾನು ನೋಡೇ ಇಲ್ಲ ಎಂದು ಶೋಭಾ ಹೇಳುತ್ತಿರುವುದು ಏಕೆ ಎಂಬುದು ಹಲವರಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!