April 29, 2024

MALNAD TV

HEART OF COFFEE CITY

ಬಿಜೆಪಿ ಲೋಕಸಭಾ ಟಿಕೆಟ್ ಫೈಟ್: ಶೋಭಾ ಕರಂದ್ಲಾಜೆ ಪರ ಕಾಂಗ್ರೆಸ್ ಶಾಸಕ ತಮ್ಮಯ್ಯ

1 min read

ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ ಪರ ಕಾಂಗ್ರೆಸ್ ಶಾಸಕ ಎಚ್.ಡಿ ತಮ್ಮಯ್ಯ ತೋರಿಸಿರುವ ಒಲವು ಲೋಕಸಭಾ ಟಿಕೆಟ್ ಫೈಟ್ ನಲ್ಲಿ ಸ್ಥಳೀಯ ಎಂಎಲ್ಎ ಪಾತ್ರದ ಬಗ್ಗೆ ಇದೀಗ ಎಲ್ಲೆಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ದುಷ್ಮನ್ ಕಾ ದುಷ್ಮನ್ ದೋಸ್ತ್ ಎಂಬಂತೆ ಶೋಭಾ ಪರ ನಿಲ್ಲುವವರ ಸಂಖ್ಯೆ ಪಕ್ಷ ಮೀರಿ ಬೆಳೆಯುತ್ತಿದೆ.

ಉಡುಪಿ ಚಿಕ್ಕಮಗಳೂರು ಬಿಜೆಪಿ ಲೋಕಸಭಾ ಟಿಕೆಟ್ ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಭಯ ದೊರೆತ ನಂತರ ಶೋಭಾ ಕರಂದ್ಲಾಜೆ ಜೊತೆ ಕಾಂಗ್ರೆಸ್ ನ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ಆಡಿರುವ ಮಾತುಗಳು ಪಕ್ಷಭೇದವಿಲ್ಲದೇ ಶೋಭಾರಿಗೆ ಬೆಂಬಲ ದೊರೆತಂತೆ ಗೋಚರಿಸುತ್ತಿದೆ. ಸ್ಪೋಟಕ ವಿಡಿಯೋ ಒಂದು ಮಲ್ನಾಡ್ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜೊತೆಗೆ ಶಾಸಕ ಎಚ್.ಡಿ ತಮ್ಮಯ್ಯ ಗೋ ಬ್ಯಾಕ್ ನ ಬಗ್ಗೆ ಚರ್ಚಿಸುವ ವೇಳೆ ದೊಡ್ಡ ಸಾಹೇಬ್ರು(ಯಡಿಯೂರಪ್ಪ) ಭರವಸೆ ಕೊಟ್ಟ ಮೇಲೆ ಬೇರೆ ಯಾರ ಆನ್ಸರ್ ಬೇಡ ಎಂದಿದ್ದಾರೆ. ಈ ಮೂಲಕ ಟಿಕೆಟ್ ನಿಮಗೆ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದಂತಿದೆ. ಇದೇ ವೇಳೆ ಮಾತನಾಡುವ ಶೋಭಾ ಕರಂದ್ಲಾಜೆ ವಿರೋಧಿಗಳ ರೀತಿಯಲ್ಲಿ ನಾನೂ ಕೂಡಾ ಬಿಜೆಪಿ ಪಕ್ಷದ ವರಿಷ್ಟರಿಗೆ ಪತ್ರಗಳನ್ನು ಬರೆಸಿ ಪೋಸ್ಟ್ ಮಾಡಲೇ ಅಥವಾ ನಾನೇ ಖುದ್ದು ಪೋಸ್ಟ್ ಮಾಡಲೇ ಎಂದು ಹಾಸ್ಯ ಮಾಡಿದ್ದಾರೆ. ಈ ಮಧ್ಯೆ ರಾಜಕೀಯ ವಿಶ್ಲೇಷಕರ ಅಭಿಮತ ಏನೆಂದರೆ ದುಷ್ಮನ್ ಕಾ ದುಷ್ಮನ್ ದೋಸ್ತ್ ಎಂಬಂತೆ ಇಬ್ಬರ ರಾಜಕೀಯ ವಿರೋಧಿ ಒಬ್ಬರೇ ಆಗಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಆದರೆ ಶೋಭಾ ಕರಂದ್ಲಾಜೆಗೆ ಟಿಕೆಟ್ ರೇಸ್ ನಲ್ಲಿದ್ದವರಿಗೆ ಕಾಂಗ್ರೆಸ್ ಎಂಎಲ್ಎ ಮಾತಿನಿಂದ ಕೋಪ ನೆತ್ತಿಗೇರುವುದು ಮಾತ್ರ ಖಡಾ ಖಂಡಿತವಾಗಿ ಸತ್ಯ ,,, ಈ ನಡುವೆ ಶೋಭಾ ಕರಂದ್ಲಾಜೆ ಯವರ ಪರ ನಿಂತಿರುವ ಎಚ್.ಡಿ ತಮ್ಮಯ್ಯ ನಡೆ ಈಗಾಗಲೇ ಉರಿದು ಬೀಳುತ್ತಿರುವ ಕಾಂಗ್ರೆಸ್ ಸ್ಥಳೀಯ ಮುಖಂಡರ ಬಾಯಿಗೆ ಆಹಾರ ಆಗದಿದ್ದರೆ ಅಷ್ಟೇ ಸಾಕು .

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!