April 29, 2024

MALNAD TV

HEART OF COFFEE CITY

ಲೋಕಸಭಾ ಬಿಜೆಪಿ ಟಿಕೆಟ್ ಫೈಟ್: ಶೋಭಾ ರವಿ ಜುಗಲ್ ಬಂದಿ

1 min read

ಚಿಕ್ಕಮಗಳೂರು: ಬಿಜೆಪಿ ಲೋಕಸಭಾ ಟಿಕೆಟ್ ಫೈಟ್ ಹಾಗೂ ಗೋ ಬ್ಯಾಕ್ ಶೋಭಾ ಅಭಿಯಾನದ ನಂತರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಿ.ಟಿ ರವಿ ಇಂದು ಮುಖಾಮುಖಿಯಾಗಿ ಒಂದೇ ವೇದಿಕೆಯಲ್ಲಿ ಕಾಣಿಕೊಂಡರು. ಆದರೆ ಇಬ್ಬರೂ ಕೂಡಾ ಟಿಕೆಟ್ ಆಕಾಂಕ್ಷೆ ಬಗ್ಗೆ ತುಟಿ ಬಿಚ್ಚದೇ ಕಮಲವೇ ಕ್ಯಾಂಡಿಡೇಟ್ ಎಂದರಾದರೂ ಇಬ್ಬರ ನಡುವೆ ಟಿಕೆಟ್ ಪೈಪೋಟಿ ಇದೆ ಅನ್ನೋದನ್ನ ಪರೋಕ್ಷವಾಗಿ ಹೇಳಿದರು.

ಗೋ ಬ್ಯಾಕ್ ಶೋಭಾ ಅಭಿಯಾನ ನಂತರ ಶೋಭಾ ಕರಂದ್ಲಾಜೆ ತಾವೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬ ಹೇಳಿಕೆಯಿಂದ ಯೂಟರ್ನ್ ಹೊಡೆದಿದ್ದಾರೆ.‌ ನಾನು ಆಕಾಂಕ್ಷಿಯೇ ಅಲ್ಲ ಎನ್ನುತ್ತಾ ಮೇಲ್ನೋಟಕ್ಕೆ ಹೇಳಿದರು ಮಾಜಿ ಶಾಸಕ ಸಿ.ಟಿ ರವಿ ಶೋಭಾ

 ಕರಂದ್ಲಾಜೆ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಚಿಕ್ಕಮಗಳೂರು ನಗರದ ಪಾಂಚಜನ್ಯ ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಚುನಾವಣ ಕಚೇರಿ ಉದ್ಘಾಟನೆ ಮಾಡಿದ ಕಾರ್ಯಕ್ರಮದಲ್ಲಿ ಇಬ್ಬರೂ ಮುಖಂಡರು ಮುಖಾಮುಖಿಯಾದರು. ಈ ವೇಳೆ ಪರೋಕ್ಷವಾಗಿ ಒಬ್ಬರನೊಬ್ಬರು ಕಾಲೆಳೆದುಕೊಳ್ಳುವ ರೀತಿಯಲ್ಲಿ ಟಿಕೆಟ್ ಫೈಟ್ ಬಗ್ಗೆ ಮಾತನಾಡಿದರು. ಬೀದಿಯಲ್ಲಿ ಟಿಕೆಟ್ ನಿರ್ಧಾರ ಆಗೋದಿಲ್ಲ, ಮಾಧ್ಯಮದವರು ಟಿಕೆಟ್ ಕೊಡಲ್ಲ ಎನ್ನುವ ಮೂಲಕ ಸದಾ ಮಾಧ್ಯಮದ ಮುಂದೆ ಇರುವ ಸಿ.ಟಿ ರವಿಗೆ ಶೋಭಾ ಕರಂದ್ಲಾಜೆ ಟಾಂಗ್ ಕೊಟ್ರು,ಇತ್ತ ಇಡೀ ದೇಶದ 543 ಕ್ಷೇತ್ರಗಳಿಗೂ ಕಮಲವೇ ಬಿಜೆಪಿ ಅಭ್ಯರ್ಥಿಗಳು (ಪಕ್ಷದ ಚಿಹ್ನೆ) ಎಂದು ನರೇಂದ್ರ ದಾಮೋದರ್ ದಾಸ್ ಮೋದಿ ಹೇಳಿದ್ದಾರೆ ಎಂದು ಹೇಳುವ ಮೂಲಕ ಅಭ್ಯರ್ಥಿ ಶೋಭಕ್ಕನೇ ಅನ್ನೋದು ಇನ್ನೂ ಫೈನಲ್ ಆಗಿಲ್ಲ ಎನ್ನುತ್ತಾ ಸಿ.ಟಿ ರವಿ ಪರೋಕ್ಷವಾಗಿ ಟಿಕೆಟ್ ರೇಸ್ ನಲ್ಲಿದ್ದೇನೆ ಎಂಬ ಅಭಿಲಾಷೆ ವ್ಯಕ್ತಪಡಿಸಿದರು.

ಈ ನಡುವೆ ಬಿಜೆಪಿ ಪಕ್ಷದಲ್ಲೂ ಕಚ್ಚಾಟ ಇದೆ ಎನ್ನುವ ಭರಾಟೆಯಲ್ಲಿ ಐದು ವರ್ಷ ಕಚ್ಚಾಟ ಮಾಡಿ ಚುನಾವಣೆ ವೇಳೆ ಕಾಂಗ್ರೆಸ್ ನವರು ಒಂದಾಗುತ್ತಾರೆ ಆದರೆ ನಾವು ಐದು ವರ್ಷ ಒಂದಾಗಿದ್ದು ಚುನಾವಣೆ ವೇಳೆ ಕಚ್ಚಾಡುವಂತಾಗಿದೆ ಎನ್ನುವ ಮೂಲಕವು ಸಿ.ಟಿ ರವಿ ಪಕ್ಷದಲ್ಲಿ ಲೋಕಸಭಾ ಟಿಕೆಟ್ ಗಾಗಿ ಫೈಟ್ ಇದೆ ಅನ್ನೋದನ್ನ ಒಪ್ಪಿಕೊಂಡರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!