ಶಿವರಾತ್ರಿ ಹಿನ್ನಲೆ, ಗಂಗಾಜಲ ವಿತರಣೆ
1 min read
ಚಿಕ್ಕಮಗಳೂರು: ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ದೇವಸ್ಥಾನಗಳಿಗೆ ಮಜರಾಯಿ ಇಲಾಖೆಯಿಂದ ಗಂಗಾ ಜಲವನ್ನು ವಿತರಣೆ ಮಾಡಲಾಯಿತು.
ಮಾಜಿ ಸಚಿವ ಮಾಲೂರು ಎಸ್.ಎನ್ ಕೃಷ್ಣಯ್ಯ ಶೆಟ್ಟಿ ಕೊಡುಗೆಯಾಗಿ ನೀಡಿದ ಗಂಗಾಜಲವನ್ನು ಮುಜರಾಯಿ ತಹಶೀಲ್ದಾರ್ ಯೋಗೀಶ್ ಭೋಳರಾಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ಸಂಗ್ರಹಿಸಿ ಸಂಜೆಯಿಂದ ಮಂಗಳವಾರ ಬೆಳೆಗ್ಗೆಯ ವರೆಗೂ ವಿತರಣೆ ಮಾಡಲಾಯಿತು.
ಚಿಕ್ಕಮಗಳೂರು ತಾಲೂಕಿನ 80 ದೇವಾಲಯಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ 30 ದೇವಸ್ಥಾನಗಳಿಗೆ ಈ ಗಂಗಾಜಲವನ್ನು ವಿತರಣೆ ಮಾಡಲಾಗಿದೆ ಎಂದು ತಹಶೀಲ್ದಾರ್ ಯೋಗೀಶ್ ಈ ವೇಳೆ ತಿಳಿಸಿದರು. ಈ ವೇಳೆ ಭೋಳರಾಮೇಶ್ವ ದೇವಸ್ಥಾನದ ಅರ್ಚಕ ಕುಮಾರ್ ಭಟ್, ಮುಜರಾಯಿ ಇಲಾಖೆಯ ದರ್ಶನ್ ಸೇರಿದಂತೆ ಹಲವು ಸಿಬ್ಬಂದಿಗಳು ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g