ಅಮೃತ್ ಮಹಲ್ ಕಾವಲು: ಚಿರತೆ ಸೆರೆ
1 min readಬೀರೂರು: ಬೀರೂರು-ಕಡೂರು ರಸ್ತೆಯಲ್ಲಿರುವ ಅಮೃತ್ ಮಹಲ್ ಕಾವಲು ತಳಿ ಸಂವರ್ಧನಾ ಕೇಂದ್ರದ ಕಾವಲು ಚೌಡೇಶ್ವರಿ ದೇವಸ್ಥಾನದ ಬಳಿ ತಿಂಗಳಿನಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಮಂಗಳವಾರ ಬೋನಿನಲ್ಲಿ ಸೆರೆ ಸಿಕ್ಕಿದೆ.
ಕಳೆದ ಒಂದು ತಿಂಗಳಿನಿಂದ ಅಮೃತ್ ಮಹಲ್ ಕಾವಲಿನಲ್ಲಿ ಚಿರತೆ ಅಡ್ಡಾಡುತ್ತಿದ್ದು, ನಾಯಿ, ಹಸು ಮತ್ತು ಕುರಿಗಳನ್ನು ಕೊಂದು ತಿಂದಿತ್ತು. ಅಲ್ಲದೆ ದೇವಸ್ಥಾನದ ಸಿಸಿ ಟಿವಿಯಲ್ಲಿ ನಾಯಿಯನ್ನು ಭೇಟೆಯಾಡಿ ಹೊತ್ತೊಯ್ದ ಚಿತ್ರೀಕರಣ ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆ ದೂರಿನನ್ವಯ ಇಲಾಖೆ ಬೋನನ್ನು ಇಡಲಾಗಿತ್ತು, ಆದರೆ ಅಲ್ಲಿ ವಾರ ಕಳೆದರೂ ಚಿರತೆಯ ಸುಳಿವು ಸಿಕ್ಕಿರಲಿಲ್ಲ. ಅದೇ ಬೋನನ್ನು ಸೋಮವಾರ ಇನ್ನೊಂದು ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಬೋನಿನಲ್ಲಿ ಮೇಕೆಯನ್ನು ಕಟ್ಟಿದ್ದು, ಮೇಕೆಯನ್ನು ಭೇಟೆಯಾಡಲು ಬಂದ ಚಿರತೆ ಬೋನಿನಲ್ಲಿ ಸುರಕ್ಷಿತವಾಗಿ ಸೆರೆ ಸಿಕ್ಕಿದೆ.
ಅರಣ್ಯ ಅಧಿಕಾರಿ ತನುಜ್ ಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ, ಚಿರತೆ 2 ವರ್ಷದ ಪ್ರಾಯದ್ದಾಗಿದೆ. ಇದನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ. ಇದನ್ನು ಭದ್ರಾ ಅಭಯಾರಣ್ಯಕ್ಕೆ ರವಾನಿಸಲಾಗುತ್ತದೆ. ತಾಲೂಕಿನ ಜಿಗಣೆಹಳ್ಳಿ, ಬಾಣೂರು ಹೊಸಳ್ಳಿ ಮತ್ತು ಗೆದ್ಲೆಹಳ್ಳಿ ಸುತ್ತಮತ್ತಲೂ ಕೂಡ ಚಿರತೆ ದಾಳಿಗಳ ಕುರಿತು ದೂರುಗಳು ಕಂಡು ಬಂದಿವೆ. ಅವುಗಳನ್ನು ಕೂಡ ಸುರಕ್ಷಿತವಾಗಿ ಸೆರೆ ಹಿಡಿಯಲು ಪ್ರಯತ್ನಿಸುತ್ತೇವೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g