ಶಾಖಾದ್ರಿ ಜಾಮೀನು ಅರ್ಜಿ ವಜಾ; ಬಂಧಿಸುತ್ತಾರಾ ಕಾಫಿನಾಡ ಪೊಲೀಸರು…?
1 min readಚಿಕ್ಕಮಗಳೂರು : ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಸಿಕ್ಕಿದ್ದ ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಧರ್ಮಗುರು ಗೌಸ್ ಮೊಹಿನುದ್ದಿನ್ ಶಾಖಾದ್ರಿಯವರು ನಿರೀಕ್ಷಣಾ ಜಾಮೀನಿಗೆ ಹಾಕಿದ್ದ ಅರ್ಜಿಯನ್ನ ಚಿಕ್ಕಮಗಳೂರು ಸೆಷನ್ ಕೋರ್ಟ್ ರಿಜೆಕ್ಟ್ ಮಾಡಿದ್ದು, ಶಾಖಾದ್ರಿ ಬಂಧನವಾಗುತ್ತಾ, ಅರಣ್ಯ ಇಲಾಖೆ ಹಾಗೂ ಪೊಲೀಸರು ಶಾಖಾದ್ರಿಯನ್ನ ಬಂಧಿಸ್ತಾರಾ ಎಂಬ ಪ್ರಶ್ನೆ ಮೂಡಿದೆ.
ಅಕ್ಟೋಬರ್ 27ರಂದು ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಸಿಗುತ್ತಿದ್ದಂತೆ ಅಧಿಕಾರಿಗಳು ವಿಚಾರಣೆ ಹಾಜರಾಗುವಂತೆ ಅವರ ಮನೆಗೆ ನೋಟೀಸ್ ನೀಡಿದ್ದರು. ಶಾಖಾದ್ರಿ ವಿಚಾರಣೆಗೆ ಹಾಜರಾಗದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಇದೀಗ, ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನ ವಜಾ ಮಾಡಿದೆ. ದಾಳಿ ವೇಳೆ ಸಿಕ್ಕ ಚಿರತೆ-ಜಿಂಕೆ ಚರ್ಮದ ಬಗ್ಗೆ ಸೂಕ್ತ ದಾಖಲೆಗಳ ಜೊತೆ ನವೆಂಬರ್ 2ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಆದರೆ, ಶಾಖಾದ್ರಿ ವಿಚಾರಣೆಗೆ ಹಾಜರಾಗದೆ ತಮ್ಮವರ ಕಡೆಯಿಂದ ನೀರಿಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಶಾಖಾದ್ರಿ ಅವರ ಮನೆ ತಪಾಸಣೆ ಮಾಡುವ ವೇಳೆಯೂ ಮನೆ ಕೀಯನ್ನ ಬೇರೆಯವರ ಕೈನಲ್ಲಿ ಕಳಿಸಿದ್ದರು. ಅಂದೂ ಕೂಡ ಅವರು ಮನೆಗೆ ಬಂದಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು 10 ಗಂಟೆ ಕಾದು ಮನೆ ತಪಾಸಣೆ ನಡೆಸಿದ್ದರು. ವಿಚಾರಣೆಗೂ ಹಾಜರಾಗದ ಶಾಖಾದ್ರಿ ಆರೋಗ್ಯ ಸರಿ ಇಲ್ಲ ಅಂತ ವೈದ್ಯರ ಸೂಚನೆ ಮೇರೆಗೆ ಮೂರು ವಾರಗಳ ಬೆಡ್ ರೆಸ್ಟ್ ಬೇಕು ಅಂತ ವಿಚಾರಣೆಗೆ ಗೈರಾಗಿದ್ದರು. ಶಾಖಾದ್ರಿ ಕಡೆಯವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಹುಲಿ ಉಗುರಿನ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರು ಅರ್ಚಕರನ್ನ ಬಂಧಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಯನ್ನೇ ವಿಚಾರಣೆಗೆ ಒಳಪಡಿಸಿದ್ದರು. ಅವಧೂತ ವಿನಯ್ ಗುರೂಜಿಯನ್ನೂ ಬಿಟ್ಟಿರಲಿಲ್ಲ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಶಾಖಾದ್ರಿಯನ್ನ ಬಂಧಿಸಿಲ್ಲ ಎಂದು ಸಾರ್ವಜನಿಕರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ, ಶಾಖಾದ್ರಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು ಅಧಿಕಾರಿಗಳು ಈಗಲಾದರೂ ಬಂಧಿಸುತ್ತಾರಾ ಎಂದು ಸ್ಥಳಿಯರು ಪ್ರಶ್ನಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g