May 10, 2024

MALNAD TV

HEART OF COFFEE CITY

ಪೊಲೀಸರ ಅಮಾನತು ಕೂಡಲೇ ರದ್ದುಪಡಿಸಿ: ಪೊಲೀಸ್ ಕ್ಷೇಮಾಭಿವೃದ್ಧಿ ಸಂಘ ಒತ್ತಾಯ

1 min read

ಚಿಕ್ಕಮಗಳೂರು: ಪೊಲೀಸರು ಹಾಗೂ ವಕೀಲರ ಸಂಘರ್ಷದಲ್ಲಿ ಪೊಲೀಸರದ್ದು ಯಾವುದೇ ತಪ್ಪಿಲ್ಲ , ಕಾನೂನು ತಿಳಿದಿದ್ದರೂ ವಕೀಲ ಪ್ರೀತಂ ಮಾತಿಗೆ ಮಾತು ಬೆಳೆಸಿ ಘಟನೆಗೆ ಕಾರಣವಾಗಿದ್ದಾರೆ. ಕೂಡಲೇ ಪೊಲೀಸರ ಅಮಾನತು  ರದ್ದುಪಡಿಸಿ ಎಂದು ಪೊಲೀಸ್ ಕ್ಷೇಮಾಭಿವೃದ್ಧಿ ಸಂಘ ಎಸ್ಪಿಗೆ ಮನವಿ ಮಾಡಿದೆ.

ವಕೀಲರು ಹಾಗೂ ಪೊಲೀಸರ ನಡುವೆ ನಡೆಯುತ್ತಿರುವ ಜಟಾಪಟಿ ಮತ್ತಷ್ಟು ಹೆಚ್ಚುತ್ತಿದೆ. ಪೊಲೀಸರ ಪರ ಇಂದು ಪೊಲೀಸ್ ಕ್ಷೇಮಾಭಿವೃದ್ಧಿ ಸಂಘ ಬೀದಿಗಿಳಿದಿದೆ. ನೂರಾರು ನಿವೃತ್ತ ಪೊಲೀಸರು ಇಂದು ಎಸ್ಪಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಿದರು. ಘಟನೆಯಿಂದ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತಾಗಿದೆ. ಕೂಡಲೇ ಆರು ಜನ ಪೊಲೀಸರ ಅಮಾನತ್ತನ್ನು ಹಿಂಪಡೆಯಬೇಕು ಎಂದು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಂಚಾಕ್ಷರಪ್ಪ ಒತ್ತಾಯಿಸಿದರು. ಘಟನೆಯಲ್ಲಿ ಪೊಲೀಸರ ತಪ್ಪಿಲ್ಲ, ವಕೀಲ ಪ್ರೀತಂ ಮಾತಿಗೆ ಮಾತು ಬೆಳೆಸಿ ಘಟನೆಗೆ ಕಾರಣವಾಗಿದ್ದು ಪೊಲೀಸರ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ ಎಂದು ಎಸ್ಪಿಯವರಿಗೆ ಮನವಿ ಮಾಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!