ಪುನೀತಾ ನಮನ
1 min readಚಿಕ್ಕಮಗಳೂರು : ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಪುನೀತಾ ನಮನ, ಪುಷ್ಪ ನಮನ, ದೀಪ ನಮನ ಹಾಗೂ ನುಡಿ ನಮನ ಸಾರ್ವಜನಿಕ ಶ್ರದ್ಧಾಂಜಲಿಯನ್ನು ಅವತಿ ಹೋಬಳಿಯ ಡಾ|| ಬಿ.ಆರ್ ಅಂಬೇಡ್ಕರ್ ಭವನದಲಿ ನಡೆಯಿತು.
ಆವತಿ ಹೋಬಳಿಯ ಕಾಫಿ ಬೆಳೆಗಾರರು ಸೇರಿದಂತೆ ಸಾರ್ವಜನಿಕರು ಪುನಿತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಹಾಗೂ ದೀಪ ನಮನ ವನ್ನು ಸಲ್ಲಿಸಿದರು. ಸರಳವಾಗಿ ಅಲಂಕಾರಗೊಂಡ ವೇದಿಕೆಯಲ್ಲಿ ಪುನಿತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಕಾಫಿ ಬೆಳೆಗಾರು, ಗಣ್ಯರು ಹಾಗೂ ಶಾಲಾ ಮಕ್ಕಳು ಪುಷ್ಟ ನಮನ ಸಲ್ಲಿಸಿದರು. ನಂತರ ಸ್ಥಳೀಯರು ನುಡಿ ನಮನ ಸಲ್ಲಿಸಿದರು.
ಪುನಿತ್ ರಾಜ್ ಕುಮಾರ್ ರವರಿಂದ ಪ್ರೇರಣೆಗೊಂಡ ೩೦ ಕ್ಕೂ ಹೆಚ್ಚು ಕಾಫಿ ಬೆಳೆಗಾರರು ಸ್ಥಳದಲ್ಲೇ ನೇತ್ರ ದಾನಕ್ಕೆ ತಮ್ಮ ಹೆಸರನ್ನು ನೊಂದಾಯಿಸಿದರು. ಅಲ್ಲದೆ ನಾಲ್ಕು ಜನರು ತಮ್ಮ ದೇಹ ದಾನ ಮಾಡುವುದಾಗಿ ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g