ಗಾಂಜಾ ಆರೋಪಿಗೆ ಜೈಲು ಶಿಕ್ಷೆ-ದಂಡ
1 min readಚಿಕ್ಕಮಗಳೂರು: ಗಾಂಜಾ ಆರೋಪಿತನಿಗೆ ಚಿಕ್ಕಮಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯುವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ ಶಂಕರಪುರ ಎಂಬಲ್ಲಿ ಆರೋಪಿಯಾದ ಪೈರೋಜ್ ಈತನು ತನ್ನ ವಾಸದ ಮನೆಯ ಮುಂಭಾಗದಲ್ಲಿ ನಿಂತುಕೊಡು ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಸಣ್ಣ ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಮಾರಾಟ ಮಾಡುತ್ತಿದ್ದಾಗ ಪೊಲೀಸ್ ಅಧಿಕಾರಿ ಮೊಹಮ್ಮದ್ ಸಲಿಂ ಅಬ್ಬಾಸ್ ದಾಳಿ ನಡೆಸಿ ಆರೋಪಿಯ ಬಳಿಯಿದ್ದ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಬೀಜ ಮಿಶ್ರಿತ ಗಾಂಜಾ ಸೊಪ್ಪು ೨.೮೦೦ ಕೆ.ಜಿ ನಷ್ಟು ಗಾಂಜಾ ಸೊಪ್ಪನ್ನು ತುಂಬಿರುವ ಸಣ್ಣ ಸಣ್ಣ ಪ್ಯಾಕೆಟ್ಗಳ ಕವರ್ ಇರುವ ೧೦ ಬಂಡಲ್ಗಳ ವಶಪಡಿಸಿದ್ದರು.
ಗಾಂಜಾ ಸೊಪ್ಪನ್ನು ಪಂಪಾ ನಗರದ ಸಲೀಂ ಯಾನೆ ಮಿಂತಿ ಸಲೀಂ ಹಾಗೂ ಆಸೀಫ್ ಇವರು ಪೈರೋಜ್ಗೆ ತಂದುಕೊಟ್ಟು, ಗಾಂಜಾ ಮಾರಾಟ ಮಾಡಿ ಬರುವ ಹಣದಲ್ಲಿ ಶೇ.೧೦ ಹಣವನ್ನು ಕೊಡುವುದಾಗಿ ಹೇಳಿದ್ದರು.
ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡು, ಅಪರಾಧವು ಸಾಭೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನ್ಯಾಯಾಧೀಶರಾದ ಶುಭಗೌಡರ್ ೧ ನೇ ಆರೋಪಿ ಪೈರೋಜ್ಗೆ ೪ ವರ್ಷ ಕಠಿಣ ಶಿಕ್ಷೆ ಹಾಗೂ ೨೫ ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದ್ದಲ್ಲಿ ಪುನಃ ೮ ತಿಂಗಳು ಸಾದಾ ಶಿಕ್ಷೆ ವಿಧಿಸಿ ನ್ಯಾಯಾಲಯವು ನ.೧೧ರಂದು ತೀರ್ಪು ನೀಡಿರುತ್ತದೆ. ಪ್ರಕರಣ ಉಳಿದ ಆರೋಪಿಗಳ ವಿಚಾರಣೆ ಪ್ರತ್ಯೇಕವಾಗಿ ನಡೆಯುತ್ತಿದೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಭಾವನ ವಾದಿಸಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g