May 17, 2024

MALNAD TV

HEART OF COFFEE CITY

ಡಿ.ಸಿ ಕಚೇರಿಗೆ ನುಗ್ಗಿ ಪ್ರತಿಭಟನೆ : ಜಿಲ್ಲಾಧಿಕಾರಿ ವಿರುದ್ಧ ಗುಡುಗಿದ ಸಂಘ ಪರಿವಾರ

1 min read

ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನೆ ಹೈಡ್ರಾಮಕ್ಕೆ ಡಿ.ಸಿ ಯವರೇ ನೇರ ಹೊಣೆ ಎಂದು ಬಿಜೆಪಿ, ಸಂಘ ಪರಿವಾರ ಗಂಭೀರ ಆರೋಪ ಮಾಡಿದೆ. ಮುಂದಿನ ಹುಣ್ಣೆಮೆ ಹಬ್ಬದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನ ಕೂಡಾ ನೀಡಲಾಗಿದೆ.

ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸುವ ಪರಿಸ್ಥಿತಿಗೆ ಕಾರಣವಾಗಿದ್ದು ಡಿ.ಸಿ ಮೀನಾ ನಾಗರಾಜ್ ಎಂದು ಬಿಜೆಪಿ ಭಜರಂಗದಳ ವಿಶ್ವ ಹಿಂದು ಪರಿಷತ್ ಗಂಭೀರ ಆರೋಪ ಮಾಡಿದೆ. ರಾಮ ಮಂದಿರ ಪ್ರಾಣ ಪ್ರತಿಷ್ಟಾನ ಹಿನ್ನೆಲೆ ದತ್ತಪೀಠದಲ್ಲಿ ಹೋಮ ನಡೆಸಲು ಅವಕಾಶ ಕೇಳಿದಾಗ ಕೊಟ್ಟಿದ್ದರೆ, ಇಷ್ಟೆಲ್ಲಾ ಆಗುತ್ತಿರಲಿಲ್ಲ, ರಾಜ್ಯ ಸರ್ಕಾರದ ಕುಮ್ಮಕ್ಕಿನಂತೆ ನಮ್ಮ ಕಾರ್ಯಕ್ರಮ ಹಾಳು ಮಾಡಲು ಡಿ.ಸಿ ಈ ರೀತಿ ಮಾಡಿದ್ದು ಹಿಂದು ವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಹೇಳಿದ್ದಾರೆ. ಜನವರಿ 25 ರಂದು ದತ್ತಪೀಠದಲ್ಲಿ ಹುಣ್ಣುಮೆ ಪೂಜೆ ನಡೆಯಲಿದ್ದು ಅಂದು ಅನುಮತಿ ನೀಡದಿದ್ದರೆ ಇನ್ನಷ್ಟು ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನೂ ಅವರು ನೀಡಿದರು. ಈ ನಡುವೆ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸಹಾ ಡಿ.ಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ದತ್ತಪೀಠದಲ್ಲಿ ಹೋಮ ತಡೆದು ನಿಷೇಧ ಒಡ್ಡಿದ್ದು ಸಹಸ್ರಾರು ಹಿಂದು ಗಳಿಗೆ ನೋವಾಗಿದೆ ಇದನ್ನು ಹಿಂದು ಸಮಾಜ ಸಹಿಸುವುದಿಲ್ಲ, ಬೃಹತ್ ಪ್ರತಿಭಟನೆಯನ್ನು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆಯನ್ನ ದೇವರಾಜ್ ಶೆಟ್ಟಿ ನೀಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!