24 ಗಂಟೆಯಲ್ಲಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
1 min readಸ್ನೇಹಿತರಿಂದಲೇ ಹತ್ಯೆಯಾಗಿದ್ದ ಕಡೂರು ಯುವಕನ ಕೊಲೆ ಪ್ರಕರಣವನ್ನು 24 ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ, ನಾಲ್ವರು ಆರೋಪಿಗಳನ್ನು ಬಂಧಿಸಿರುವ ವಿಶೇಷ ತಂಡ ಬಹುಮಾನಕ್ಕೂ ಭಾಜನವಾಗಿದೆ. ಅಜ್ಜಿ ಮನೆಗೆ ಬಂದಿದ್ದ ಯುವಕನ್ನು ಸ್ನೇಹಿತರೆ ಕೊಲೆ ಮಾಡಿದ್ದ ಕಡೂರು ಹತ್ಯೆ ಪ್ರಕರಣವನ್ನು 24 ಗಂಟೆಗಳಲ್ಲಿ ಪೊಲೀಸರು ಭೇದಿಸಿದ್ದಾರೆ, ಹತ್ಯೆ ಮಾಡಿದ್ದ ನಾಲ್ವರು ಅರೋಪಿಗಳನ್ನ ಬಂಧಿಸಿದ್ದು ನಾಗಮಂಗಲದ ಮನೋಜ್, ಕೌಶಿಕ್, ಹಾಗೂ ಕಿರಣ್, ರಾಜು ಸಿಕ್ಕಿಬಿದ್ದಿದ್ದಾರೆ,
ಕಡೂರು ತಾಲೂಕಿನ ಹೊಸೂರು ಹುಲಿಗುಂದಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಅಜ್ಜಿ ಮನೆಯಿಂದ ಹೋಗಿದ್ದ ದರ್ಶನ್ ಶವವಾಗಿ ಪತ್ತೆಯಾಗಿದ್ದ, ಗುರುವಾರ ರಾತ್ರಿ ಸ್ನೇಹಿತರ ಜೊತೆ ತೆರಳಿದ್ದ ವೇಳೆ ಮಾತಿಗೆ ಮಾತು ಬೆಳೆದು ಬೈದಾಡಿಕೊಂಡು ದರ್ಶನ್ ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು, ಪ್ರಕರಣ ಭೇದಿಸಲು ತರೀಕೆರೆ ಡಿವೈಎಸ್.ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು, 24 ಗಂಟೆಗಳ ಒಳಗೆ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡದ ಕರ್ತವ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ ಶ್ಲಾಘಿಸಿದ್ದು ವಿಶೇಷ ತಂಡದಲ್ಲಿದ್ದ ಪಿ.ಎಸ್.ಐ ಗಳಾದ ನವೀನ್, ಧನಂಜಯ್, ಪೊಲೀಸರಾದ ರೇಣುಕಾ ಪ್ರಸಾದ್ , ದೇವರಾಜ್ ರಿಗೆ ಬಹುಮಾನವನ್ನು ಘೋಷಿಸದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g