ಅಜ್ಜಿ ಮನೆಗೆ ಬಂದಿದ್ದವನನ್ನು ಕರೆಸಿಕೊಂಡು ಕೊಲೆ ಮಾಡಿದ ಸ್ನೇಹಿತರು
1 min readಚಿಕ್ಕಮಗಳೂರು: ರಾತ್ರೋರಾತ್ರಿ ಕಾರಿನಲ್ಲಿ ಕರೆದೊಯ್ದ ಮೂವರು ಯುವಕರು ತಮ್ಮ ಸ್ನೇಹಿತನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಕಡೂರು ತಾಲೂಕಿನ ಹೊಸೂರು ಸಮೀಪ ನಡೆದಿದೆ.
ಬೆಂಗಳೂರಿಂದ ಅಜ್ಜಿಯ ಮನೆಗೆ ಬಂದಿದ್ದ ಯುವಕನನ್ನು ಕರೆ ಮಾಡಿ ಕರೆಸಿಕೊಂಡ ಸ್ನೇಹಿತರು ಕತ್ತು ಕೊಯ್ದು ಮರ್ಡರ್ ಮಾಡಿರುವ ಘಟನೆ ಕಡೂರಿನ ಮಾಡಾಳು ಹೊಸೂರು ಸಮೀಪ ನಡೆದಿದೆ. ಡ್ರೈವರ್ ಕೆಲಸ ಮಾಡುತ್ತಿದ್ದ ದರ್ಶನ್ ಕೊಲೆಯಾದ ಯುವಕನಾಗಿದ್ದು, ಕಳೆದ ರಾತ್ರಿ ಬೆಂಗಳೂರಿಂದ ಮೂರ್ನಾಲ್ಕು ಜನ ಅವನ ಸ್ನೇಹಿತರು ಅಜ್ಜಿಯ ಮನೆಯಲ್ಲಿದ್ದ ದರ್ಶನ್ ನನ್ನು ಕರೆಸಿಕೊಂಡು ಮಧ್ಯರಾತ್ರಿ ಕೊಲೆ ಮಾಡಿದ್ದಾರೆ.
ಮೂಲತಃ ಮಧುಗಿರಿಯವನಾಗಿದ್ದ ದರ್ಶನ್ ಬೆಂಗಳೂರಿನ ಆರ್ ಆರ್ ನಗರದಲ್ಲಿ ವಾಸವಿದ್ದ ಎನ್ನಲಾಗಿದ್ದು ಮೊನ್ನೆ ಕಡೂರಿನ ಅಜ್ಜಿ ಮನೆಗೆ ಬಂದಿದ್ದಾನೆ ಇದನ್ನು ತಿಳಿದ ಆತನ ಮೂವರು ಸ್ನೇಹಿತರು ಕಡೂರಿಗೆ ಬರುತ್ತಿದ್ದೇವೆ ಬಾ ಎಂದು ಕರೆಸಿಕೊಂಡು ದರ್ಶನ್ ಮಾವ ಸೋಮಶೇಖರ್ ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಸ್ನೇಹಿತರ ಜೊತೆ ಹೋಗಿ ಬರುತ್ತೇನೆಂದು ಹೋದವನು ಶವವಾಗಿ ಬಂದಿದ್ದಾನೆ, ಹಣಕಾಸಿನ ವಿಚಾರ ಅಥವಾ ಹುಡುಗಿ ವಿಷಯಕ್ಕೆ ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು ಇತ್ತೀಚಿಗೆ ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಕೆಲವು ದಿನಗಳ ಹಿಂದೆ ದರ್ಶನ್ ಬಿಡುಗಡೆಯಾಗಿದ್ದನಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g