May 9, 2024

MALNAD TV

HEART OF COFFEE CITY

ನಗರಸಭೆ ಸಾಮಾನ್ಯಸಭೆ ಅನುಮೋದನೆಗೆ ತಡೆಯಾಜ್ಞೆ ಕೋರಿ ಅರ್ಜಿ

1 min read

ಚಿಕ್ಕಮಗಳೂರು: ಕಳೆದ ಡಿಸೆಂಬರ್ 20 ರಂದು ನಡೆದ ನಗರಸಭೆಯ ಸಾಮಾನ್ಯಸಭೆ ಊರ್ಜಿತವಲ್ಲ ಸಭೆಯ ಎಲ್ಲಾ ವಿಷಯಗಳ ಅನುಮೋದನೆಗೆ ತಡೆಯಾಜ್ಞೆ ನೀಡಬೇಕೆಂದು ಜಿಲ್ಲಾಧಿಕಾರಿಗೆ ವಕೀಲರ ಮೂಲಕ ಅಪೀಲು ಸಲ್ಲಿಸಲಾಗಿದೆ.

ಚಿಕ್ಕಮಗಳೂರು ನಗರಸಭೆಯಲ್ಲಿ ಡಿಸೆಂಬರ್ 20 ರಂದು ನಡೆದ ಸಾಮಾನ್ಯ ಸಭೆಯ ಯಾವುದೇ ವಿಷಯಕ್ಕೂ ಅನುಮೋದನೆ ನೀಡಬಾರದು ಎಂದು ಬಿಜೆಪಿ, ಜೆಡಿಎಸ್ ನ ನಗರಸಭೆ ಸದಸ್ಯರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಿಗೆ ಅಪೀಲು ಮಾಡಿದ್ದಾರೆ. ವಕೀಲ ದಯಾನಂದ್ ಮೂಲಕ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿರುವ ಜೆಡಿಎಸ್ ಸದಸ್ಯ ಎ.ಸಿ ಕುಮಾರ್, ಬಿಜೆಪಿ ಸದಸ್ಯರ ಜೊತೆ ತೆರಳಿ ಅಪೀಲು ಸಲ್ಲಿಸಿದರು. ತಡೆಯಾಜ್ಞೆಯ ಅರ್ಜಿ ಇದೇ ಜನವರಿ 9 ರಂದು ವಿಚಾರಣೆ ನಡೆಯಲಿದೆ. ಈ ಮೂಲಕ ಕಾನೂನು ಹೋರಾಟಕ್ಕೆ ಬಿಜೆಪಿ ಜೆಡಿಎಸ್ ಮುಂದಾಗಿದೆ. ಸಭೆಯು ಕಾನೂನು ಬಾಹಿರವಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದ್ದು ಅನುಮೋದನೆ ಕಾರ್ಯರೂಪ ಆಗಬಾರದು ಎಂದು ವಕೀಲ ದಯಾನಂದ ತಿಳಿಸಿದರು. ನಗರಸಭೆ ರೆಸುಲೂಷನ್ ಪಾಸ್ ಮಾಡುವ ಸಾಧ್ಯತೆ ಇದ್ದು ಸಾರ್ವಜನಿಕರ ಹಣ ಲೂಟಿ ಹೊಡೆಯುವ ಮೊದಲು ಸಭೆಯನ್ನು ಅಮಾನತ್ತಿನಲ್ಲಿಡಬೇಕೆಂದು ಅರ್ಜಿದಾರ ಎ.ಸಿ ಕುಮಾರ್ ಮನವಿ ಮಾಡಿದ್ದಾರೆ. ಬಹುಮತ ಇಲ್ಲವೆಂದು ಈ ಮೊದಲೇ ಜಿಲ್ಲಾಧಿಕಾರಿಗೆ ತಿಳಿಸಿದ್ದೆವು, ಜನರ ತೆರಿಗೆ ಹಣ ಲೂಟಿ ಹೊಡಯುವ ಹುನ್ನಾರ ಸಕ್ಸಸ್ ಆಗಲು ಬಿಡುವುದಿಲ್ಲ ಯಾವುದೇ ಹೋರಾಟಕ್ಕೆ ಸಿದ್ದ ಎಂದು ಬಿಜೆಪಿ ಸದಸ್ಯ ಮಧುಕುಮಾರ್ ರಾಜ್ ಅರಸ್ ಹೇಳಿದ್ದಾರೆ. ಈ ನಡುವೆ ತಕ್ಷಣ ತಡೆಯಾಜ್ಞೆ ನೀಡಲು ಜಿಲ್ಲಾಧಿಕಾರಿ ಮೀನಾ ನಾಗರಾಜ್ ನಿರಾಕರಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!