May 4, 2024

MALNAD TV

HEART OF COFFEE CITY

ಡೀಮ್ಡ್ ಫಾರೇಸ್ಟ್ ಪುನರ್ ಪರಿಶೀಲನ ವರದಿಯ ತರಾತುರಿಗೆ ವಿರೋಧ

1 min read

ಚಿಕ್ಕಮಗಳೂರು..: ಜಿಲ್ಲೆಯ ಡೀಮ್ಡ್ ಫಾರೇಸ್ಟ್ ಮತ್ತು ಕಂದಾಯ ಭೂಮಿಗಳ ಬಗ್ಗೆ ಪುನರ್ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಹಿನ್ನೆಲೆ. ಜಿಲ್ಲಾಧಿಕಾರಿಗಳು ತುರ್ತಾಗಿ ಅರಣ್ಯಾಧಿಕಾರಿಗಳ ಹಾಗೂ ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿ. ಹತ್ತು ದಿನಗಳಲ್ಲಿ ಮಾಹಿತಿ ನೀಡಲು ಮುಂದಾದ ಹಿನ್ನೆಲೆ ಕಸ್ತೂರಿ ರಂಗನ್ ವರದಿ ವಿರೋಧಿ ಮತ್ತು ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶ ಯೋಜನಾ ವಿರೋಧಿ ಹೋರಾಟ ಸಮಿತಿ ವಿರೋಧ ವ್ಯಕ್ತ ಪಡಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಪ್ರಧಾನ ಸಂಚಾಲಕ ಎಸ್ ವಿಜಯ್ ಕುಮಾರ್. ಈ ಸಂಬಂಧ ದಿನಾಂಕ 14 ರಂದು ಅರಣ್ಯಾಧಿಕಾರಿಗಳ ಹಾಗೂ ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಹತ್ತು ದಿನದಲ್ಲಿ ಡೀಮ್ಡ್ ಸಮೀಕ್ಷೆ ಮಾಡಿಕೊಡಿ ಎಂದು ಹೇಳಿದೆ ಇದಕ್ಕೆ ನಮ್ಮ ಆಕ್ಷೇಪಣೆ ಇದೆ. ಹತ್ತು ದಿನಗಳಲ್ಲಿ ಇದರ ಸಮೀಕ್ಷೆ ಮಾಡಲಾಗುವುದಿಲ್ಲ. ಕುಳಿತಲ್ಲೆ ಮುಳ್ಳಯನ ಗಿರಿ ಜಾಗ ಸೇರಿದಂತೆ 13 ಸಾವಿರ ಎಕರೆಯನ್ನ ಡೀಮ್ಡ್ ಎಂದು ಕರೆದಿದ್ದಾರೆ. ವರ್ಷಾನುಗಟ್ಟಲೆ ಮಾಡದೇ ಇರೋ ಕೆಲಸವನ್ನ ಹತ್ತು ದಿನಗಳಲ್ಲಿ ಮಾಡಿ ಜನ ವಸತಿ ಸೇರಿದಂತೆ ಇತರೆ ಪ್ರದೇಶವನ್ನ ಡೀಮ್ಡ್ ಎಂದು ವರದಿ ಕೊಡುವ ಅಪಾಯ ಇದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!