ಕೃತಕ ಬುದ್ದಿವಂತಿಕೆ ಮತ್ತು ಯಂತ್ರ ಕಲಿಕೆ ಕೋರ್ಸ್ ಆರಂಭ
1 min readಚಿಕ್ಕಮಗಳೂರು : ಚಿಕ್ಕಮಗಳೂರು ನಗರ ಎಐಟಿ ಕಾಲೇಜ್ ನಲ್ಲಿ ಶೈಕ್ಷಣಿಕ ವರ್ಷದಲ್ಲಿ ತಾಂತ್ರಿಕ ಯುಗಕ್ಕೆ ಅನುಣವಾಗುವಂತೆ ಎಐಟಿ ಕಾಲೇಜಿನಲ್ಲಿ ಕೃತಕ ಬುದ್ದಿವಂತಿಕೆ ಮತ್ತು ಯಂತ್ರಕಲಿಕೆ ಎಂಬ ಬಹು ಬೇಡಿಕೆ ಕೋರ್ಸ್ ಅನ್ನು ಆರಂಭಲಾಗುತ್ತಿದೆ ಎಂದು ಎಐಟಿ ಕಾಲೇಜು ಪ್ರಾಂಶುಪಾಲರಾದ ಡಾ.ಸಿಟಿ ಜಯದೇವ್ ತಿಳಿಸಿದರು.
ಸುದ್ದಿ ಘೋಷ್ಟಿಯಲ್ಲಿ ಮಾತನಾಡಿದ ಅವರು ಶೈಕ್ಷಣಿಕ ವರ್ಷದಿಂದ ತಾಂತ್ರಿಕಯುಗಕ್ಕೆ ಅನುಗುಣವಾಗಿ ಹೊಸ ಕೋರ್ಸ್ ಆರಂಭಿಸಲಾಗುತ್ತಿದೆ. ಹೆಚ್ಚು ಕೌಶಲ್ಯ ಉಳ್ಳ, ಹಾಗೂ ಹೆಚ್ಚು ಹುದ್ದೆಗೆ ಬೇಡಿಕೆ ಇರುವ ಕೋರ್ಸ್ ಇದಾಗಿದ್ದು.. ಅಖಿಲ ಭಾರತ ತಾಂತ್ರಿಕ ಪರಿಷತ್ ನಿಂದ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಅನುಮತಿ ಪಡೆದಿದ್ದು. 60 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಸಿಇಟಿ ಮೂಲಕ ಪ್ರವೇಶ ಪಡೆಯಬಹುದಾಗಿದ್ದು. 25 ರಷ್ಟು ಆಡಳಿತ ಮಂಡಳಿ ಸೀಟ್ , 30 ಕಾಮೆಡ್ ಸೀಟ್ ಹಾಗೂ 45 ರಷ್ಟು ಸಿಇಟಿ ಸೀಟ್ ಗಳಾಗಿ ನಿಗಧಿ ಮಾಡಲಾಗಿದೆ. ಈ ಕೋರ್ಸ್ಗೆ ಹೆಚ್ಚಿನ ಬೇಡಿಕೆ ಇದ್ದು ವಿಧ್ಯಾರ್ಥಿಗಳಿಗೆ ಹೆಚ್ಚು ಉದ್ದೋಗ್ಯದ ಅವಕಾಶ ಇರುವುದರಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತೆ ಪ್ರಾಂಶುಪಾಲರಾದ ಡಾ. ಸಿಟಿ ಜಯದೇವ್ ತಿಳಿಸಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g