ಹರಿ ಪ್ರಸಾದ್ ವಿರುದ್ಧ ಸಿ.ಟಿ. ರವಿ ಗರಂ: ಪೊಲಿಟಿಕಲ್ ಲೇಬಲ್ ನಿಂದ ಲೀಡರ್ ಆಗಲು ಅಸಾಧ್ಯ
1 min read
ಚಿಕ್ಕಮಗಳೂರು: ಬಿಜೆಪಿ ಪಕ್ಷದ ಪ್ರಮುಖ ಸಿ.ಟಿ. ರವಿಯವರನ್ನು ಕಿಂಡಲ್ ಮಾಡಿದ್ದ ಹರಿ ಪ್ರಸಾದ್ ಮೇಲೆ ಸಿ.ಟಿ. ರವಿ ಮರುವಾಗ್ದಾಳಿ ನಡೆಸಿದ್ದಾರೆ.
‘ಲೂಟಿ ರವಿ ಮೊದಲು ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಲಿಯಲಿ’ ಎಂದು ಕಟುವಾಗಿ ಟೀಕಿಸಿದ್ದ ಹರಿಪ್ರಸಾದ್ ವಿರುದ್ಧ ಸಿ.ಟಿ. ರವಿ ಕಿಡಿ ಕಾರಿದ್ದಾರೆ.
ರಾಜಕಾರಣದಲ್ಲಿ ಹಫ್ತಾ ಗ್ಯಾಂಗ್ ನಾಯಕರೆಲ್ಲಾ ಪೊಲಿಟಿಕಲ್ ಲೇಬಲ್ ಅಂಟಿಸಿಕೊಂಡ ಮಾತ್ರಕ್ಕೆ ಲೀಡರ್ ಆಗೋಕೆ ಸಾಧ್ಯವಿಲ್ಲ ಎಂದರು
ಹರಿಪ್ರಸಾದ್ ಒಂದು ಕಾಲದಲ್ಲಿ ಹಫ್ತಾ ವಸೂಲಿ ಗ್ಯಾಂಗನಲ್ಲಿದ್ದವರು ಎಂದು ಬೆರಳು ಮಾಡಿ ತೋರಿದ್ದಾರೆ
ಹರಿಪ್ರಸಾದ್ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ನನಗಿಲ್ಲ ಎಂದು ಒಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ಸಿ.ಟಿ. ರವಿ.
‘ಈವರೆಗೂ ಒಂದೇ ಒಂದು ಚುನಾವಣೆಯಲ್ಲಿ ಹರಿಪ್ರಸಾದ್ ಗೆದ್ದಿಲ್ಲ, ಗೆಲ್ಲೋಕೆ ಸಾಧ್ಯನೂ ಇಲ್ಲ’ ಎಂದು ಹರಿಪ್ರಸಾದ್ ಬಗ್ಗೆ ಭವಿಷ್ಯ ನುಡಿದಿದ್ದಾರೆ ಸಿ.ಟಿ. ರವಿ.
ಗತಕಾಲದ ಖಾತೆ ಕೆದಕಿದ ಸಿ.ಟಿ. ರವಿ, ‘ಹರಿಪ್ರಸಾದ್ ರೀತಿಯಲ್ಲಿ ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯನು ಅಲ್ಲ ಹೀಗಾಗಿ ನಂದು ಹಫ್ತಾ ವಸೂಲಿ ಮಾಡಿದ ಕ್ಯಾರೆಕ್ಟರ್ ಅಲ್ಲ’ ಅಂತ ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g