ಮಳೆಯಲ್ಲೇ ಕಂಬ ಏರಿ ವಿದ್ಯುತ್ ಸಂಪರ್ಕ ದುರಸ್ಥಿಗೊಳಿಸಿದ ಮೆಸ್ಕಾಂ ಸಿಬ್ಬಂದಿ
1 min read
ರಾತ್ರಿ ಹನ್ನೊಂದು ಗಂಟೆಗೆ ಸುರಿಯೋ ಮಳೆ ಮಧ್ಯೆಯೂ ಟಾರ್ಚ್ ಬೆಳಕಿನಲ್ಲಿ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಂಬವನ್ನೇರಿ ಲೈನ್ ದುರಸ್ಥಿ ಮಾಡಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗೋಡು ಗ್ರಾಮದ ಬಳಿ ನಡೆದಿದೆ. ಮೆಸ್ಕಾಂ ಸಿಬ್ಬಂದಿಗಳ ಈ ಕೆಲಸಕ್ಕೆ ಶೃಂಗೇರಿ ತಾಲೂಕು ಹಾಗೂ ಜಯಪುರ ಗ್ರಾಮದ ನಿವಾಸಿಗಳು ಮೆಸ್ಕಾಂ ಸಿಬ್ಬಂದಿಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಭಾರೀ ಗಾಳಿಗೆ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೊಪ್ಪ ತಾಲೂಕಿನ ಜಯಪುರ ಹಾಗೂ ಶೃಂಗೇರಿ ತಾಲೂಕಿನ ಜನ ಕತ್ತಲಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಎಲ್ಲಿ ವಿದ್ಯುತ್ ಸಮಸ್ಯೆಯಾಗಿದೆ ಎಂದು ನಾಲ್ಕು ಗಂಟೆಗಳ ಕಾಲ ಮೆಸ್ಕಾಂ ಸಿಬ್ಬಂದಿಗಳು ಹುಡುಕಾಡಿದ್ದಾರೆ. ರಾತ್ರಿ ಹನ್ನೊಂದು ಗಂಟೆ ವೇಳೆಗೆ ಸಮಸ್ಯೆಯ ಜಾಗ ಹಿಡಿದ ಸಿಬ್ಬಂದಿಗಳು ರಾತ್ರಿ ಹನ್ನೊಂದು ಗಂಟೆಗೆ ಕಂಬ ಹತ್ತಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿದ್ದಾರೆ. ಇಬ್ಬರು ಸಿಬ್ಬಂದಿಗಳು ಕಂಬ ಏರಿ ಲೈನ್ ದುರಸ್ತಿ ಮಾಡುತ್ತಿದ್ದರೆ ಮತ್ತೋರ್ವ ಸಿಬ್ಬಂದಿ ಕೆಳಗೆ ನಿಂತು ಟಾರ್ಚ್ನಲ್ಲಿ ಲೈಟ್ ಹಾಕಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳ ಈ ಕಾರ್ಯಕ್ಕೆ ಜಯಪುರ ಹಾಗೂ ಶೃಂಗೇರಿ ಜನ ಮೆಚ್ಚುಗೆ ಸೂಚಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g