May 2, 2024

MALNAD TV

HEART OF COFFEE CITY

ಚಿಕ್ಕಮಗಳೂರು ನಗರಸಭೆ ವಿವಾದ, ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಕೈ ಮುಗಿದ ಅಧ್ಯಕ್ಷ

1 min read

 

ಚಿಕ್ಕಮಗಳೂರು: ನಗರಸಭೆಯ ಬಿಜೆಪಿ-ಜೆಡಿಎಸ್‍ನ ಅಭಿವೃದ್ಧಿಯ ಆಂತರಿಕ ಕಲಹ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಕದ ಬಡಿದಿದೆ. ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಕೋಲ್ಡ್ ವಾರ್ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಸದ್ಯಕ್ಕೆ ಧರ್ಮಸ್ಥಳ ತಲುಪಿದೆ. ಜೆಡಿಎಸ್-ಬಿಜೆಪಿ ಸದಸ್ಯರುಗಳ ಒಳಜಗಳದಿಂದ ಒಬ್ಬರ ಮೇಲೋಬ್ಬರು ದೂರು ನೀಡಿದ ಪರಿಣಾಮ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ. ನಗರಸಭೆ ಸದಸ್ಯ ಕುಮಾರ್‍ಗೌಡ ಕುಮಾರ್‍ಗೌಡ ನಗರಸಭೆ ಪ್ರವೇಶಿಸುವಾಗ ನೀವು ನಿಮ್ಮ ವಾರ್ಡಿನ ಕೆಲಸಗಳನ್ನ ಮಾತ್ರ ಮಾಡಿಸಬೇಕು ಎಂದು ದ್ವಾರಪಾಲಕ ತಡೆದಿದ್ದಾರೆ. ದ್ವಾರಪಾಲಕನ ವರ್ತನೆ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಮಾತಿಗೆ ಮಾತು ಬೆಳೆದು ಕುಮಾರ್‍ಗೌಡ ಬೈದರು, ಜಾತಿ ನಿಂದನೆ ಮಾಡಿದ್ದಾರೆಂದು ದ್ವಾರಪಾಲಕ ಕುಮಾರ್‍ಗೌಡ ವಿರುದ್ಧ ದೂರು ನೀಡಿದ್ದಾರೆ. ನಮ್ಮದು ಭ್ರಷ್ಟಾಚಾರ ರಹಿತ ಅಭಿವೃದ್ಧಿ ಆಡಳಿತ ಅಂತೀರಲ್ಲ ಹಾಗಾದ್ರೆ, ನಾನು ಆರ್.ಟಿ.ಐ.ನಲ್ಲಿ ಕೇಳಿದ ನಗರಸಭೆಯಲ್ಲಿನ ಭ್ರಷ್ಟಾಚಾರದ ದಾಖಲೆಗಳನ್ನ ನೀಡಿ ಎಂದಿದ್ದಾರೆ.

 

ಅದ್ಯಾವುದನ್ನೂ ನೀಡಿಲ್ಲ ಎಂದು ನಗರಸಭೆ ಸದಸ್ಯ ಕುಮಾರ್‍ಗೌಡ ಆರೋಪಿಸಿದ್ದಾರೆ. ಇದರ ಬೆನ್ನಲ್ಲೆ ನಗರಸಭೆಯ ಮತ್ತೋರ್ವ ಜೆಡಿಎಸ್ ಸದಸ್ಯ ಗೋಪಿ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ಮೇಲೆ ಜಾತಿ ನಿಂದನೆ ಕೇಸ್ ನೀಡಿದ್ದಾರೆ. ನಗರಸಭೆಯ ಅಫಿಯಲ್ಸ್ ವಾಟ್ಸಾಪ್ ಗ್ರೂಪಿನಿಂದ ನನ್ನನ್ನ ರಿಮೂವ್ ಮಾಡಿದ್ದರು. ಹಾಗಾಗಿ, ಅದರ ಬಗ್ಗೆ ಹಾಗೂ ನನ್ನ ವಾರ್ಡಿನ ಕೆಲಸದ ನಿಮಿತ್ತ ಅಧ್ಯಕ್ಷರ ಬಳಿ ಚರ್ಚಿಸಲು ಹೋಗಿದ್ದೆ. ಆಗ ಅಧ್ಯಕ್ಷರು ಹಾಗೂ ಆಯುಕ್ತರು ನೀನು ಗ್ರೂಪಿನಲ್ಲಿ ಇರಲು ಲಾಯಕ್ಕಿಲ್ಲ. ಏನು ಬೇಕಾದ್ರು ಮಾಡಿಕೋ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆಂದು ಗೋಪಿಯೂ ಅಧ್ಯಕ್ಷ ವೇಣುಗೋಪಾಲ್ ಹಾಗೂ ಆಯುಕ್ತ ಬಸವರಾಜ್ ವಿರುದ್ಧ ದೂರು ನೀಡಿದ್ದಾರೆ. ಒಬ್ಬರ ಮೇಲೋಬ್ಬರು ದೂರು ನೀಡಿದ್ದರಿಂದ ಈಗ ಎಲ್ಲರ ಮೇಲೂ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಅಧ್ಯಕ್ಷ ವೇಣುಗೋಪಾಲ್ ನಗರಸಭೆ ಅಧ್ಯಕ್ಷರ ಕಾರಿನಲ್ಲಿ ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯಕ್ಕೆ ಟ್ರಿಪ್ ಹೋಗಿದ್ದಾರೆ. ಇದು ಏನೆಂದು ಪ್ರಶ್ನಿಸಿದ್ದಾರೆ.

 

 

ಸರ್ಕಾರದ ಗಾಡಿ, ನಮ್ಮ ತೆರಿಗೆ ದುಡ್ಡು ನಗರಸಭೆ ಕೆಲಸಕ್ಕೆ ಮಾತ್ರ ಬಳಸಬೇಕು. ಹೊರ ಹೋಗಬೇಕಂದ್ರೆ ಕಡತಗಳ ಜೊತೆ ಜಿಲ್ಲಾಧಿಕಾರಿ ಅನುಮತಿಯೂ ಬೇಕು. ಇವರು ಏನು ಇಲ್ಲದೆ, ಯಾವ ದಾಖಲೆಯೂ ಇಲ್ಲದೆ ಸಂಸಾರ ಸಮೇತ ಟ್ರಿಪ್ ಹೋಗಿದ್ದಾರೆ. ಹೊರಗಡೆ ಹೋದಾಗ ಹೆಚ್ಚು-ಕಮ್ಮಿಯಾದರೆ ಇನ್ಸುರೆನ್ಸ್ ಸಿಗುವುದು ಕೂಡ ಕಷ್ಟವಾಗುತ್ತೆ. ಅದಕ್ಕೆ ಜವಾಬ್ದಾರಿ ಯಾರೆಂದು ಪ್ರಶ್ನಿಸಿದ್ದಾರೆ. ಸರ್ಕಾರದ ವಾಹನದಲ್ಲಿ ಟೂರ್ ಹೋಗಿ ಬಂದ ಅಧ್ಯಕ್ಷ ವೇಣುಗೋಪಾಲ್, ನಾನ್ ಟೂರ್ ಹೋಗಿದ್ದು ನಿಜ. ಆದರೆ, ನನ್ನ ದುಡ್ಡಲ್ಲಿ ಡಿಸೇಲ್ ಹಾಕಿಸಿಕೊಂಡು ಹೋಗಿದ್ದೆ ಎಂದು ಸಮಾಜಾಯಿಷಿ ನೀಡಿದ್ದಾರೆ. ಜೊತೆಗೆ, ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಅದಕ್ಕೆ ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ಅವರನ್ನ ನೀವೇ ನೋಡಿಕೊಳ್ಳಿ ಎಂದು ಕೈಮುಗಿದು ಬಂದಿದ್ದೇನೆ ಎಂದಿದ್ದಾರೆ. ಆದರೆ, ದಿನದಿಂದ ದಿನಕ್ಕೆ ಸದಸ್ಯರುಗಳ ಈ ಕೋಲ್ಡ್ ವಾರ್ ಜೋರಾಗುತ್ತಲೇ ಇದೆ. ಇದು ಇನ್ನೆಲಿಗೆ ಹೋಗಿ ಮುಟ್ಟುತ್ತೋ ಅಂತ ನಗರದ ಜನ ಕೂಡ ಚಿಂತಾಕ್ರಾಂತರಾಗಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!