ನಗರಸಭೆ ವಾಹನ ದುರ್ಬಳಕೆ ಆರೋಪ ವ್ಯಾಪಕ ಟೀಕೆ
1 min readಸರ್ಕಾರಿ ಕಾರು ದುರುಪಯೋಗಪಡಿಸಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ನಗರಸಭೆ ಅಧ್ಯಕ್ಷರು ಹಾಗೂ ಕುಟುಂಬದವರು ತೆರಳಿದ್ದು, ನಗರಸಭೆ ಕಾರಿನ ಜೊತೆಗೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹಾಗೂ ಕುಟುಂಬದವರು ಇರುವ ಪೋ ಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಚರ್ಚೆಗೆ ಗ್ರಾಸ ವಾಗಿದೆ.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮತ್ತು ಅವರ ಕುಟುಂಬದವರು ಇತ್ತೀಚೆಗೆ ಧರ್ಮಸ್ಥಳ ಮತ್ತು ಸುಬ್ರಮಣ್ಯ ದೇವಸ್ಥಾನಕ್ಕೆ ಯಾತ್ರೆ ತೆರಳಿದ್ದು, ನಗರಸಭೆ ಅಧ್ಯಕ್ಷರ ಕಾರು ಬಳಕೆ ಮಾಡಿಕೊಂಡಿದ್ದಾರೆ. ಕಾರಿನ ಮುಂದೇ ನಗರಸಭೆ ಅಧ್ಯಕ್ಷರು ಮತ್ತು ಅವರ ಕುಟುಂಬ ದವರು ಇರುವ ಪೋಟೋ ವ್ಯಾಟ್ಸ್ಅಪ್ಗಳಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರಿಂದ ವಿರೋಧವು ವ್ಯಕ್ತವಾಗಿದೆ.ನಗರಸಭೆ ಅಧ್ಯಕ್ಷರಿಗೆ ನೀಡಿರುವ ಕಾರು ಸಾರ್ವಜನಿಕರ ಹಣದಿಂದ ಖರೀದಿಸಿದ್ದು ಕಾರು. ಆ ಕಾರನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಅಧ್ಯಕ್ಷರಿಗೆ ನೀಡಿರುವ ಕಾರು ನಗರಸಭೆ ವ್ಯಾಪ್ತಿಯಲ್ಲಿ ಓಡಾಡಲು ಮಾತ್ರ ನೀಡಲಾಗಿದೆ. ಯಾರ ಅನುಮತಿ ಪಡೆದು ಧಾರ್ಮಿಕ ಕ್ಷೇತ್ರಗಳಿಗೆ ತೆರಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕಾರಿನ ಜೊತೆಗೆ ಚಾಲಕನನ್ನು ಕರೆದುಕೊಂಡು ಧಾರ್ಮಿಕ ಕ್ಷೇತ್ರಕ್ಕೆ ತೆರಳಿದ್ದಾರೆ. ಚಾಲಕನಿಗೆ ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ನೀಡಲಾಗುತ್ತದೆ. ಧಾರ್ಮಿಕ ಕ್ಷೇತ್ರಕ್ಕೆ ನಗರಸಭೆ ಅಧ್ಯಕ್ಷರು ಹೋಗಿರುವುದು ತಪ್ಪಿಲ್ಲ ಆದರೆ ಸರ್ಕಾರಿ ಕಾರು ದುರುಪಯೋಗ ಮಾಡಿಕೊಂಡಿ ರುವುದು ಎಷ್ಟರ ಮಟ್ಟಿಗೆ ಸರಿ. ಕಾರು ನಗರ ವ್ಯಾಪ್ತಿಯಿಂದ ಹೊರಗಡೆ ಹೋದಾಗ ಅವ ಘಡಗಳು ಸಂಭವಿಸಿದರೇ ಅದಕ್ಕೆ ಇಶ್ಯೂರೆನ್ಸ್ ಕೂಡ ಸಿಗುವುದಿಲ್ಲ. ಇದೆಲ್ಲವನ್ನು ತಿಳಿದಿ ರುವ ನಗರಸಭೆ ಅಧ್ಯಕ್ಷರು ಸರ್ಕಾರಿ ಕಾರನ್ನು ಧಾರ್ಮಿಕ ಕ್ಷೇತ್ರಕ್ಕೆ ತೆರಳಲು ಬಳಕೆ ಮಾಡಿ ರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರಸಭೆ ಅಧ್ಯಕ್ಷರು ಇತ್ತೀಚೆಗೆ ಧರ್ಮಸ್ಥಳ ಮತ್ತು ಸುಬ್ರಮಣ್ಯಕ್ಕೆ ತೆರಳಿದ್ದು, ಈ ವೇಳೆ ನಗರಸಭೆಯಿಂದ ಅಧ್ಯಕ್ಷರಿಗೆ ನೀಡಿರುವ ಸರ್ಕಾರಿ ಕಾರನ್ನು ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಗರಸಭೆ ಅಧ್ಯಕ್ಷರ ಕಾರು ನಗರ ವ್ಯಾಪ್ತಿಯಲ್ಲಿ ಸಂಚರಿಸಲು ಅನುಕೂಲವಾಗಲಿ ಎಂದು ನೀಡಲಾಗಿದೆ ಸರ್ಕಾರಿ ಕಾರನ್ನು ದುರುಪಯೋಗಪಡಿಸಿಕೊಂಡಿದ್ದಾರೆ.ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಅಧ್ಯಕ್ಷರು ಕಾರು ಬಳಕೆ ಮಾಡಿಕೊಳ್ಳಬೇಕು. ಹಾಗೇ ನಗರ ವ್ಯಾಪ್ತಿಯಿಂದ ಹೊರ ಭಾಗದಲ್ಲಿ ಅವಘಡಗಳು ಸಂಭವಿಸಿದರೇ, ಇಶ್ಯೂರೆನ್ಸ್ ಕ್ಲೆöÊಮ್ ಆಗುವುದಿಲ್ಲ. ಸರ್ಕಾರಿ ಕಾರನ್ನು ನಗರಸಭೆ ಅಧ್ಯಕ್ಷರು ಸ್ವಂತಕ್ಕೆ ಬಳಕೆ ಮಾಡಿಕೊಂಡಿ ರುವುದು ಸರಿಯಲ್ಲ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g