April 27, 2024

MALNAD TV

HEART OF COFFEE CITY

ಕಾರ್ಯಕರ್ತರ ಸಭೆ ವೇಳೆ ಬಹಿರಂಗಗೊಂಡ ಅಸಮಾಧಾನ

1 min read

 

ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಮುಖಂಡರ ಒಳ ಜಗಳ ಕಾರ್ಯಕರ್ತರ ಸಭೆಯಲ್ಲಿ ಬಹಿರಂಗ ಆಗಿದೆ. ಮಾಜಿ ಎಂ.ಎಲ್.ಸಿ ಗಾಯತ್ರಿ ಶಾಂತೇಗೌಡ ವೇದಿಕೆ ಹತ್ತದೆ ಮುನಿಸಿಕೊಂಡು ಕಾರ್ಯಕರ್ತರ ಸಾಲಿನಲ್ಲಿ ಕುಳಿತಿದ್ದರು. ಮನವೊಲಿಸಲು ಪ್ರಯತ್ನಿಸಿದರೂ ಒಪ್ಪದ ಗಾಯತ್ರಿ ಶಾಂತೇಗೌಡ ಉಸ್ತುವಾರಿ ಸಚಿವ ಜಾರ್ಜ್ ಖುದ್ದು ಕೆಳಗಿಳಿದು ಬಂದು ಅವರನ್ನು ವೇದಿಕೆಗೆ ಕರೆದೊಯ್ದರು.

ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಕಾರ್ಯಕರ್ತರ ಸಭೆ ನಡೆಯುವ ವೇಳೆ ಪಕ್ಷದ ಮುಖಂಡರ ನಡುವಿನ ಮುಸುಕಿನ ಗುದ್ದಾಟ ಬಟಾ ಬಯಲಾಗಿದೆ. ಮಾಜಿ ಎಂಎಲ್.ಸಿ ಗಾಯತ್ರಿ ಶಾಂತೇಗೌಡ ವೇದಿಕೆಯಲ್ಲಿ ಕೂರದೆ ಕಾರ್ಯಕರ್ತರ ಸಾಲಿನಲ್ಲಿ ಕುಳಿತುಕೊಂಡಿದ್ದರು. ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಇಂದು ಬೆಳಿಗ್ಗೆ ನಡೆದ ಪತ್ರಿಕಾಗೋಷ್ಠಿ ಗೆ ಸಹಾ ಕರೆದಿಲ್ಲ ಎಂದು ಬೇಸರ ಗೊಂಡು ಮುನಿಸಿಕೊಂಡು ವೇದಿಕೆ ಹತ್ತದೆ ಕುಳಿತಿದ್ದರು. ಈ ವೇಳೆ ಶಾಸಕ ಎಚ್.ಡಿ ತಮ್ಮಯ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಎಷ್ಟೇ ಪ್ರಯತ್ನ ಮಾಡಿದರೂ ಗಾಯತ್ರಿ ಶಾಂತೇಗೌಡ ವೇದಿಕೆಗೆ ಬರಲಿಲ್ಲ ಈ ವೇಳೆ ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ತಾವೇ ಅವರ ಬಳಿ ಹೋಗಿ ಕರೆದುಕೊಂಡು ಬರಬೇಕಾಯಿತು. ಆದರೆ ಗಾಯತ್ರಿ ಮುನಿಸಿಗೆ ಬೇರೆಯದ್ದೆ ಕಾರಣ ಇದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ವೇಳೆ ಈ ರೀತಿಯ ಬೆಳವಣಿಗೆ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದು ಒಂದೆಡೆಯಾದರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!