ಮೇ.28ರಂದು ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ
1 min readಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ವತಿಯಿಂದ ಮೇ.28ರಂದು ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಹಾಗೂ ಓಪನ್ ಮ್ಯಾರಥಾನ್ ಸ್ಫರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ಸದಸ್ಯ ಜಾವಿದ್ ಫರ್ವಿದ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳೆಹೊನ್ನೂರು ಸಮೀಪದ ಖಾಂಡ್ಯಕ್ಲಬ್ ಆವರಣದಲ್ಲಿ ಸ್ಫರ್ಧೆಗೆ ಚಾಲನೆ ದೊರೆಯಲಿದ್ದು, ಸೈಕ್ಲಿಂಗ್ ಸ್ಫರ್ಧೆ ಯಲ್ಲಿ 4 ವಿಭಾಗಗಳಿದ್ದು, 75 ಕಿ.ಮೀ. ಎಲೈಟ್ ರೇಸ್ ಸ್ಫರ್ಧೆ ಖಾಂಡ್ಯಕ್ಲಬ್ನಿ0ದ ಆರಂಭ ಗೊಂಡು ನರಸಿಂಹರಾಜಪುರ ಸಮೀಪದಲ್ಲಿ ಯುಟರ್ನ್ ಪಡೆದು ಖಾಂಡ್ಯಕ್ಲಬ್ ಆವರಣ ದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಎರಡನೇ ವಿಭಾಗದಲ್ಲಿ 45 ಕಿ.ಮೀ. ಅಮೆಚೂರ್ ಸ್ಫರ್ಧೆ ನಡೆಯಲಿದ್ದು, ಖಾಂಡ್ಯಕ್ಲಬ್ನಿ0ದ ಆರಂಭಗೊಳ್ಳಲಿದೆ. ಗಡಿಗೇಶ್ವರದಲ್ಲಿ ಯುಟರ್ನ್ ಪಡೆದು ಖಾಂಡ್ಯಕ್ಲಬ್ಗೆ ಮತ್ತೇ ಸೇರಲಿ ದ್ದಾರೆ. ಸ್ಥಳೀಯರಿಗಾಗಿ 25 ಕಿ.ಮೀ. ಪ್ರತ್ಯೇಕ ಸ್ಫರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿ ಸಿದರು.ವಿಜೇತ ತಂಡಕ್ಕೆ ಪ್ರಥಮ ಬಹುಮಾನ 15 ಸಾವಿರ ರೂ. ಆಕರ್ಷಕ ಟ್ರೋಪಿ, ದ್ವಿತೀಯ ಬಹುಮಾನ 10 ಸಾವಿರ ರೂ. ಆಕರ್ಷಕ ಟ್ರೋಪಿ, ತೃತೀಯ ಬಹುಮಾನ 7 ಸಾವಿರ ರೂ. ಟ್ರೋಪಿ, 4ನೇ ಬಹುಮಾನ 5ಸಾವಿರ ರೂ. ನೀಡಲಾಗುವುದು ಎಂದರು.
ಮ್ಯಾರಥಾನ್ ಸ್ಫರ್ಧೆಯಲ್ಲಿ 18 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದೆ. 18 ವರ್ಷದೊಳಗಿನ ಮಕ್ಕಳು 2ಕಿ.ಮೀ. ಓಡಬಹುದಾಗಿದೆ. ಸ್ಫರ್ಧೆ ಬೆಳಿಗ್ಗೆ 5:30ಕ್ಕೆ ಖಾಂಡ್ಯ ಕ್ಲಬ್ ಆವರಣದಿಂದ ಆರಂಭಗೊಳ್ಳಲಿದೆ. ಪುರುಷ ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಸ್ಫರ್ಧೆ ನಡೆಯಲಿದೆ.
42 ಕಿ.ಮೀ. ಕರಗಣಿ, ಮಾಗುಂಡಿ ಮೂಲಕ ವಾಪಸ್ಸಾಗಲಿದೆ. 21 ಕಿ.ಮೀ. ಮ್ಯಾರ ಥಾನ್ 5:45ಕ್ಕೆ ಆರಂಭವಾಗಲಿದೆ. ಬೆಳಿಗ್ಗೆ 7ಗಂಟೆಗೆ 10.ಕಿ.ಮೀ. ಓಟ ಮತ್ತು 7:30ಕ್ಕೆ 5 ಕಿ.ಮೀ. ಓಟ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮ್ಯಾರಥಾನ್ ಓಟ ಸ್ಫರ್ಧೆಗೆ ಒಟ್ಟು 2.50 ಲಕ್ಷ ರೂ. ಬಹುಮಾನದ ಮೊತ್ತವಾಗಿದೆ. ಲೈಫ್ಲೈನ್ಫೀಡ್ಸ್, ಉತ್ತರ ಆರೋಗ್ಯ ಸ್ನಾö್ಯಕ್, ಪರ್ಪಲ್ ಆರೆಂಜ್ ಸೂಪರ್ ಮಾರ್ಕೆಟ್, ಓವಿಯನ್ ಲೈಪ್ ಸೈಕಲ್ ಗಳುಪ್ರಾಯೋಜಕತ್ವ ವಹಿಸಿಕೊಂಡಿವೆ. ವಿಜೇತರಿಗೆ ನಗದು ಬಹುಮಾನ ದೊಂದಿಗೆ ಟ್ರೋಫಿ, ಪ್ರಶಸ್ತಿಪತ್ರಗಳನ್ನು ನೀಡಲಾಗುತ್ತದೆ ಎಂದು ಕ್ಲಬ್ ಅಧ್ಯಕ್ಷ ಸಂಜಿತ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ| ಕೌಶಿಕ್, ಸುಮಂತ್, ನಂದಗೋಪಾಲ್, ನಂದ ನ್, ವಿನುಗೌಡ, ಎ.ಕೆ.ಪ್ರಾಕಾಶ್ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g