May 17, 2024

MALNAD TV

HEART OF COFFEE CITY

ಅಧಿಕಾರಿಗಳು, ಜನ ಪ್ರತಿನಿಧಿಗಳ ವಿರುದ್ಧ ಮಲೆಮನೆ ನಿರಾಶ್ರಿತರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ

1 min read

ಚಿಕ್ಕಮಗಳೂರು :  2019ರಲ್ಲಿ ಸುರಿದ ಮಳೆಯಿಂದ ಮಲೆಮನೆ ಗ್ರಾಮದಲ್ಲಿ ಮನೆ ಕಳೆದುಕೊಂಡ ಸಂಸ್ತ್ರಸ್ತಗೆ  ಸರ್ಕಾರ ಇನ್ನು ಭರವಸೆ ಈಡೇರಿಸಿಲ್ಲ ಬರೀ  ಮಾತಿನಲ್ಲೇ ಸಮಾಧಾನ ಮಾಡುತ್ತಿದೆ ಎಂದು ಮಲೆಮನೆ ಗ್ರಾಮದಲ್ಲಿ ಮನೆ ಕಳೆದುಕೊಂಡ ಸಂಸ್ತ್ರಸ್ತರು ಮೂಡಿಗೆರೆ ತಾಲೂಕಿನ ಜಾವಳಿ ನಾಡ ಕಚೇರಿ ಬಳಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ಕಳೆದ 2019 ಆಗಸ್ಟ್ 9 ರಂದು ಮಲೆನಾಡ ಭಾಗದಲ್ಲಿ 22 ಇಂಚು ಮಳೆ ಸುರಿದು ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ 6 ಮನೆ ಸಂಪೂರ್ಣ ನೆಲ ಸಮವಾಗಿದ್ದವು ಮಳೆಯ ಆರ್ಭಟಕ್ಕೆ ಮನೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿದ್ದವು. ಆದರೆ ಮನೆ ನೆಲ ಸಮಾವಾದ ಮೇಲೆ ಮಲೆಮನೆ ಗ್ರಾಮಕ್ಕೆ  ಬಿ.ಎಸ್.ವೈ. ಅಶೋಕ್, ಮಾಧುಸ್ವಾಮಿ, ಸಿ.ಟಿ.ರವಿ, ಶೋಭಾ ಸೇರಿದಂತೆ ಅನೇಕ ಅಧಿಕಾರಿಗಳು ಯಾರೂ ಬಂದರೂ ಬಂದು ಹೋದರು ನೋ ಯೂಸ್ . ಮಲೆಮನೆ ಗ್ರಾಮ ಕೊಚ್ಚಿ ಹೋಗಿ  2 ವರ್ಷ ಕಳೆದಿದೆ 2 ವರ್ಷದಿಂದ ಪುನರ್ವಸತಿಗಾಗಿ ನೀರಾಶ್ರಿತರು ಹೋರಾಟ ಮಾಡ್ತಾನೇ ಇದ್ದಾರೆ. ಆದರೆ ಅಧಿಕಾರಿಗಳು, ಜನನಾಯಕರು ಬರೀ ಮಾತಿನಲ್ಲೇ ಸಮಾಧಾನ ಹೇಳಿದ ಹೋಗುತ್ತಿದ್ದಾರೆ.

ಸರ್ಕಾರ ಈ ವರೆಗೂ ಏನಾದ್ರು ಕರುಣೆತೋರ ಬಹುದೆಂದು ಕಾದು ಕುಳಿತ್ತಿದ್ದ ಮಲೆಮನೆ ಗ್ರಾಮದ ಮನೆ ಕಳೆದು ಕೊಂಡ ಸಂಸ್ತ್ರಸ್ತರ ಇದೀಗಾ ಆಕ್ರೋಶ ಕಟ್ಟೆಹೊಡೆದಿದೆ. ಈವರೆಗೂ ಸರ್ಕಾರದಿಂದ ಯಾವುದೇ ಸೌಲಭ್ಯ ನಮಗೆ ಸಿಕ್ಕಿಲ್ಲ ಎಂದು  ನೊಂದ ನಿರಾಶ್ರಿತರು ಸರ್ಕಾರದ ವಿರುದ್ಧ ಮೂಡಿಗೆರೆ ತಾಲೂಕಿನ ಜಾವಳಿ ನಾಡ ಕಚೇರಿ ಬಳಿ ಸರ್ಕಾರದ ವಿರುದ್ಧ ನಿರಾಶ್ರಿತರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!